Untitled Document
Sign Up | Login    
ಕರೆ ಗಂಟೆ

ಅಂದು ಅವರು ನೀಡಿದರು ಸ್ವಾತಂತ್ರ್ಯದ ಸ್ಪರ್ಶ
ವಿದೇಶಿಯರ ಬಡಿದೋಡಿಸಿಕೊಂಡು
ಇಂದು ನಮಗಿಲ್ಲ ಸ್ವಾತಂತ್ರ್ಯದ ಹರ್ಷ
ಸ್ವದೇಶಿಯರೇ ಬಡಿದಾಡಿಕೊಂಡು

ಅವರಿಗಲ್ಲೇ ಆಯಿತು ಜ್ಞಾನೋದಯ
ಇನ್ನೆಮಗೆ ಉಳಿವಿಲ್ಲವೆಂದು
ನಮಗಿನ್ನು ಆಗಿಲ್ಲ ಅರಿವಿನ ಉದಯ
ಪರದೇಶಿಗರಾಗುವೆವು ಎಂದು

ಅಂದವರು ಮಾಡಿದರು ಬಲಿದಾನ
ದ್ರೋಹಿಗಳು ಹೊರಹೋಗಲೆಂದು
ನಾವೆಂದು ಮಾಡುವೆವು ಹೋರಾಟವ
ದ್ರೋಹಿಗಳ ಗುರುತಿಸಿಕೊಂಡು

ಆಗಬಾರದು ನಮಗೆ ಕಟ್ಟಳೆಯು ಪಾಶ
ಮಾಡಲೇ ಬೇಕು ಅದನ್ನು ನಾಶ
ಆಗುತಿಹುದು ನಿತ್ಯ ಕಾಲ ವ್ಯರ್ಥ
ಎಚ್ಚೆತ್ತುಕೊಂಡರೆ ಇದಕ್ಕೊಂದು ಅರ್ಥ.

By : ವರದರಾಜ್ ಭಟ್

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited