ಅಂದು ಅವರು ನೀಡಿದರು ಸ್ವಾತಂತ್ರ್ಯದ ಸ್ಪರ್ಶ
ವಿದೇಶಿಯರ ಬಡಿದೋಡಿಸಿಕೊಂಡು
ಇಂದು ನಮಗಿಲ್ಲ ಸ್ವಾತಂತ್ರ್ಯದ ಹರ್ಷ
ಸ್ವದೇಶಿಯರೇ ಬಡಿದಾಡಿಕೊಂಡು
ಅವರಿಗಲ್ಲೇ ಆಯಿತು ಜ್ಞಾನೋದಯ
ಇನ್ನೆಮಗೆ ಉಳಿವಿಲ್ಲವೆಂದು
ನಮಗಿನ್ನು ಆಗಿಲ್ಲ ಅರಿವಿನ ಉದಯ
ಪರದೇಶಿಗರಾಗುವೆವು ಎಂದು
ಅಂದವರು ಮಾಡಿದರು ಬಲಿದಾನ
ದ್ರೋಹಿಗಳು ಹೊರಹೋಗಲೆಂದು
ನಾವೆಂದು ಮಾಡುವೆವು ಹೋರಾಟವ
ದ್ರೋಹಿಗಳ ಗುರುತಿಸಿಕೊಂಡು
ಆಗಬಾರದು ನಮಗೆ ಕಟ್ಟಳೆಯು ಪಾಶ
ಮಾಡಲೇ ಬೇಕು ಅದನ್ನು ನಾಶ
ಆಗುತಿಹುದು ನಿತ್ಯ ಕಾಲ ವ್ಯರ್ಥ
ಎಚ್ಚೆತ್ತುಕೊಂಡರೆ ಇದಕ್ಕೊಂದು ಅರ್ಥ.