ಶ್ರೀಸಾಯಿ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ಬದ್ರಿ ಅವತು ನಿರ್ಮಿಸುತ್ತಿರುವ ‘ಝಂಡ’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬಸವನಗುಡಿ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಚಿತ್ರೀಕರಣ ನಡೆದಿದೆ.
ಯೋಗೀಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅದಿತಿರಾವ್. ವಿ.ಮನೋಹರ್, ಅಂಬುಜಾಕ್ಷಿ, ಸಂದೀಪ್, ಸುಚೀಂದ್ರಪ್ರಸಾದ್, ಕುರಿ ಸುನೀಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಎಂ.ಚಲಪತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ಸಿ.ಮಹೇಂದರ್ ಅವರ ಛಾಯಾಗ್ರಹಣವಿದೆ. ಎಸ್.ಮನೋಹರ್ ಅವರ ಸಂಕಲನವಿರುವ ‘ಝಂಡ’ ಚಿತ್ರಕ್ಕೆ ಗೌತಮ್ಶ್ರೀವಾಸ್ತವ್ ಸಂಗೀತ ನೀಡುತ್ತಿದ್ದಾರೆ. ಪ್ರಸನ್ನರ ಕಲಾ ನಿರ್ದೇಶನ ಹಾಗೂ ಸೋಮಣ್ಣ ಅವರ ನಿರ್ಮಾಣ ನಿರ್ವಹಣ ಈ ಚಿತ್ರಕ್ಕಿದೆ.