ರವೀಂದ್ರ ಗೋಪಾಲ ಅವರು ನಿರ್ಮಿಸಿರುವ ‘ಶ್ರೀರಾಘವೇಂದ್ರ ಮಹಿಮೆ’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಸೆಪ್ಟಂಬರ್ನಲ್ಲಿ ಬಿಡುಗಡೆಯಾಗಲಿದೆ.
ಕೃಷ್ಣಚಂದ್ರ ಈ ಚಿತ್ರದ ನಿರ್ದೇಶಕರು. ಶ್ರೀರಾಘವೇಂದ್ರಸ್ವಾಮಿಗಳ ಪಾತ್ರದಲ್ಲಿ ನಿರ್ಮಾಪಕ ರವೀಂದ್ರಗೋಪಾಲ್ ಅವರೇ ಅಭಿನಯಿಸಿದ್ದಾರೆ. ವಿನೋದ್ ಆಳ್ವಾ, ಸತ್ಯಪ್ರಕಾಶ್, ಶ್ರೀಧರ್, ರೇಖಾ, ಧರ್ಮ, ಅಶ್ವಿನಿ, ಸತ್ಯಪ್ರಕಾಶ್, ನಾರಾಯಣ್, ಮನೋಹರ್, ಹರಿನಾಗರಾಜು, ವೀರೇಶ್ ಮುಂತಾದವರ ಅಭಿನಯದ ಈ ಚಿತ್ರಕ್ಕೆ ಎಲ್.ಎನ್.ಸೂರ್ಯ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ಕುಮಾರ್ ಸಂಗೀತ ನೀಡಿದ್ದಾರೆ.