ಕೆ.ಕೆ.ಆರ್ ಮೂವೀ ಹೌಸ್ ಲಾಂಛನದಲ್ಲಿ ಕಿರಣ್ಕುಮಾರ್ ರೆಡ್ಡಿ ಅವರು ನಿರ್ಮಿಸಿರುವ ‘ಅಲೆ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಗೋಪಿಕಿರಣ್ ಕಥೆ, ಚಿತ್ರಕಥೆ ಬರೆದು ಪ್ರಧಾನ ನಿರ್ದೇಶನ ಮಾಡಿದ್ದಾರೆ. ಅದತ್ ನಿರ್ದೇಶನದ ಈ ಚಿತ್ರಕ್ಕೆ ವಿಜಯ್ ಭರಮಸಾಗರ ಸಂಭಾಷಣೆ ಬರೆದಿದ್ದಾರೆ. ಎ.ರಾಜಾ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಕೆ. ಎಂ.ಪ್ರಕಾಶ್ ಸಂಕಲನ, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಬಾಬುಖಾನ್ ಕಲಾ ನಿರ್ದೇಶನ ‘ಅಲೆ’ ಚಿತ್ರಕ್ಕಿದೆ.
ತನುಷ್ ಈ ಚಿತ್ರದ ನಾಯಕ. ಹರ್ಷಿಕ ಪೂಣಚ್ಛ ನಾಯಕಿ. ಚಂದ್ರಶೇಖರ್, ರಾಮಕೃಷ್ಣ, ಶಕೀಲಾ, ಸುಮನ್ ಶೆಟ್ಟಿ, ಜೊಸೈಮನ್, ಪದ್ಮಜಾರಾವ್, ತಬಲ ನಾಣಿ, ಭವಾನಿಪ್ರಕಾಶ್, ಪಿ.ಎನ್.ಸತ್ಯ, ಸುರೇಶ್ಚಂದ್ರ, ಹರೀಶ್ರಾಯ್, ಮಿತ್ರ, ಕೆಂಪೇಗೌಡ, ಬಿರಾದಾರ್, ವಿಜಯಸಾರಥಿ, ದುಬೈ ರಫ಼ೀಕ್, ಸೂರ್ಯಕಿರಣ್, ಸತೀಶ್ ಗೌಡ, ದಿಲೀಪ್ ರಮಣ, ಮಾ||ಮಂಜುನಾಥ್, ಮಾ||ಚಿರಂಜೀವಿ, ಡ್ಯಾನಿ ಕುಟ್ಟಪ್ಪ, ನವೀನ್, ಸಂಜೀವ್, ಪ್ರಸಾದ್ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.