ಸಿರಿವರ ಕಲ್ಚರಲ್ ಅಕಾಡಮಿ ಲಾಂಛನದಲ್ಲಿ ರವೀಂದ್ರನಾಥ್ ಸಿರಿವರ, ಯೋಗಾನಂದ್, ಸಿದ್ದರಾಜು, ಕೃಷ್ಣಪ್ಪ ಅವರು ನಿರ್ಮಿಸಿರುವ ‘ಗಾಂಧಿ ಜಯಂತಿ‘ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ರವೀಂದ್ರನಾಥ್ ಸಿರಿವರ ಈ ಚಿತ್ರದ ನಿರ್ದೇಶಕರು.
ಸುದರ್ಶನ್ ಆಳ್ವಾರ್ ಚಿತ್ರಕ್ಕೆ ಕಥೆ ಬರೆದರೆ ಗಿರಿರಾಜ ಸಂಭಾಷಣೆ ಬರೆದಿದ್ದಾರೆ. ಬಾಬು ಛಾಯಾಗ್ರಹಣ, ಫಲ್ಗುಣ ಸಂಗೀತ ನಿರ್ದೇಶನ, ಹಾಗೂ ಉದಯರವಿಹೆಗ್ಡೆ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್ಗೌಡ, ದತ್ತಣ್ಣ, ಗುರುಮೂರ್ತಿ, ಪದ್ಮಬಾಬು, ಶ್ರೀದೇವಿ, ಸಂಗಮೇಶ್, ವೆಂಕಟರಾಜು, ಶ್ರೀಧರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.