ಉಪೇಂದ್ರ ಅಭಿನಯದ 'ಬಸವಣ್ಣ' ಚಿತ್ರ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದೆ.
ದಂಡುಪಾಳ್ಯ ಖ್ಯಾತಿಯ ಶ್ರೀನಿವಾಸರಾಜು ನಿರ್ದೇಶನದ 'ಬಸವಣ್ಣ' ಚಿತ್ರ ಚಿತ್ರೀಕರಣದ ಮುಂಚೆಯೇ ವಿವಾದ ಸೃಷ್ಟಿಸಿದ್ದು, ಇದೀಗ ಮತ್ತೊಂದು ವಿವಾದವನ್ನು ಎಬ್ಬಿಸಿದ್ದ. ಬಸವಣ್ಣ ಎಂಬ ಟೈಟಲ್ ನ ಚಿತ್ರದಲ್ಲಿ ಉಪೇಂದ್ರ ಕೈಯಲ್ಲಿ ಕತ್ತಿ ಇರುವುದೇ ವಿವಾದಕ್ಕೆ ಕಾರಣವಾಗಿದೆ.
ಈ ಹಿಂದೆ ಬಸವಣ್ಣ ಶೀರ್ಷಿಕೆ ಜೊತೆ ಗನ್ ಇಟ್ಟು ವಿವಾದಕ್ಕೆ ಕಾರಣವಾಗಿತ್ತು,ಇದೀಗ ಉಪ್ಪಿ ಕೈಯಲ್ಲಿ ಕತ್ತಿ ಹಿಡಿದಿರುವುದು ಚರ್ಚೆಗೆ ಕಾರಣವಾಗಿದೆ. ಏನೇ ಆದರೂ ಆರಂಭದಲ್ಲೇ ಬಸವಣ್ಣ ಚಿತ್ರಕ್ಕೆ ವಿಘ್ನ ಎದುರಾಗಿರುವುದಂತೂ ಸತ್ಯ.