ಶೈನ್ಸಿಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುದೇಶ್ ಭಂಡಾರಿ ಅವರು ನಿರ್ಮಿಸಿರುವ ‘ಚಲ್ಲಾಪಿಲ್ಲಿ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಂಗಭೂಮಿಯಲ್ಲಿ ಅನುಭವ ಪಡೆದಿರುವ ಹಾಗೂ ಹಲವು ತುಳು ಚಿತ್ರಗಳಿಗೆ ಸಹನಿರ್ದೇಶಕರಾಗಿ ದುಡಿದಿರುವ ಸಾಯಿಕೃಷ್ಣ(ಕುಡ್ಲ) ಈ ಚಿತ್ರದ ನಿರ್ದೇಶಕರು.
ವಿಜಯರಾಘವೇಂದ್ರ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಐಶ್ವರ್ಯನಾಗ್. ಶೋಭರಾಜ್, ನವೀನ್ಪಟೇಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸುಂದರ್ ರೈ, ಮಂದಾರ ಹಾಗೂ ಮಂಗಳೂರಿನ ರಂಗಭೂಮಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಪಿ.ಎಲ್.ರವಿ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮಿಷ್ಠ ಸಂಗೀತ ನೀಡಿದ್ದಾರೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಹರ್ಷ, ರಾಜೇಶ್, ಮಾಲೂರುಶ್ರೀನಿವಾಸ್ ನೃತ್ಯ ನಿರ್ದೇಶನ, ಬಾಬುಖಾನ್ ಕಲಾನಿರ್ದೇಶನ ಹಾಗೂ ಸುಹಾಸ್ ಸಹನಿರ್ದೇಶನ ‘ಚಲ್ಲಾಪಿಲ್ಲಿ’ ಚಿತ್ರಕ್ಕಿದೆ.