Untitled Document
Sign Up | Login    
Dynamic website and Portals
  
Home >> Movie Home >> ಮೈಸೂರಿನ ಸುತ್ತ ‘ಪ್ಯಾರ್‌ಗೆ ಆಗ್‌ಬುಟೈತೆ’
ಮೈಸೂರಿನ ಸುತ್ತ ‘ಪ್ಯಾರ್‌ಗೆ ಆಗ್‌ಬುಟೈತೆ’
ಮೈಸೂರಿನ ಸುತ್ತ ‘ಪ್ಯಾರ್‌ಗೆ ಆಗ್‌ಬುಟೈತೆ’

ರಕ್ಷಿತ ಫ಼ಿಲಂಸ್ ಲಾಂಛನದಲ್ಲಿ ಶೋಭಾಪ್ರಕಾಶ್ ಅವರು ನಿರ್ಮಿಸುತ್ತಿರುವ ‘ಪ್ಯಾರ್‌ಗೆ ಆಗ್‌ಬುಟೈತೆ‘ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ ‘ಚೆಲುವೆ ಕವಿಯಾದೆ ನಿನ್ನ ಬಣ್ಣಿಸಿ‘ ಎಂಬ ಹಾಡಿನ ಚಿತ್ರೀಕರಣ ಮೈಸೂರಿನ ಕೆ.ಆರ್.ಎಸ್, ಕರಿಘಟ್ಟ ಹಾಗೂ ಮೇಲುಕೋಟೆಯಲ್ಲಿ ನಡೆದಿದೆ. ಮದನ್-ಹರಿಣಿ ನೃತ್ಯ ನಿರ್ದೇಶನದ ಈ ಹಾಡಿನ ಚಿತ್ರೀಕರಣದಲ್ಲಿ ಕೋಮಲ್ ಹಾಗೂ ಪ್ರಾರ್ಥನಾ ಅಭಿನಯಿಸಿದ್ದರು.

ಕೋಮಲ್ ನಾಯಕರಾಗಿ ಅಭಿಯಿಸುತ್ತಿರುವ ಈ ಚಿತ್ರದ ನಾಯಕಿ ಪ್ರಾರ್ಥನಾ. ಕವಿನ್‌ಬಾಲ ಈ ಚಿತ್ರದ ನಿರ್ದೇಶಕರು. ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶನ ಮಾಡಿ ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿರುವ ಅನುಭವ ನಿರ್ದೇಶಕರಿಗಿದೆ.

ಕವಿನ್‌ಬಾಲ ಅವರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಬಾಲಭರಣಿ ಛಾಯಾಗ್ರಹಣ, ಸುರೇಶ್‌ಅರಸ್ ಸಂಕಲನವಿದೆ. ಕೇಶವಾದಿತ್ಯ(ರಾಮಜೋಗಿಹಳ್ಳಿ) ಸಂಭಾಷಣೆ ಬರೆದಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited