ರಕ್ಷಿತ ಫ಼ಿಲಂಸ್ ಲಾಂಛನದಲ್ಲಿ ಶೋಭಾಪ್ರಕಾಶ್ ಅವರು ನಿರ್ಮಿಸುತ್ತಿರುವ ‘ಪ್ಯಾರ್ಗೆ ಆಗ್ಬುಟೈತೆ‘ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ ‘ಚೆಲುವೆ ಕವಿಯಾದೆ ನಿನ್ನ ಬಣ್ಣಿಸಿ‘ ಎಂಬ ಹಾಡಿನ ಚಿತ್ರೀಕರಣ ಮೈಸೂರಿನ ಕೆ.ಆರ್.ಎಸ್, ಕರಿಘಟ್ಟ ಹಾಗೂ ಮೇಲುಕೋಟೆಯಲ್ಲಿ ನಡೆದಿದೆ. ಮದನ್-ಹರಿಣಿ ನೃತ್ಯ ನಿರ್ದೇಶನದ ಈ ಹಾಡಿನ ಚಿತ್ರೀಕರಣದಲ್ಲಿ ಕೋಮಲ್ ಹಾಗೂ ಪ್ರಾರ್ಥನಾ ಅಭಿನಯಿಸಿದ್ದರು.
ಕೋಮಲ್ ನಾಯಕರಾಗಿ ಅಭಿಯಿಸುತ್ತಿರುವ ಈ ಚಿತ್ರದ ನಾಯಕಿ ಪ್ರಾರ್ಥನಾ. ಕವಿನ್ಬಾಲ ಈ ಚಿತ್ರದ ನಿರ್ದೇಶಕರು. ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶನ ಮಾಡಿ ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿರುವ ಅನುಭವ ನಿರ್ದೇಶಕರಿಗಿದೆ.
ಕವಿನ್ಬಾಲ ಅವರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಬಾಲಭರಣಿ ಛಾಯಾಗ್ರಹಣ, ಸುರೇಶ್ಅರಸ್ ಸಂಕಲನವಿದೆ. ಕೇಶವಾದಿತ್ಯ(ರಾಮಜೋಗಿಹಳ್ಳಿ) ಸಂಭಾಷಣೆ ಬರೆದಿದ್ದಾರೆ.