Untitled Document
Sign Up | Login    
Dynamic website and Portals
  
Home >> Movie Home >> ಬೆಳಕಿನಡೆಗೆ ಚಿತ್ರಮಂದಿರದ ಕಡೆಗೆ
ಬೆಳಕಿನಡೆಗೆ ಚಿತ್ರಮಂದಿರದ ಕಡೆಗೆ
ಬೆಳಕಿನಡೆಗೆ ಚಿತ್ರಮಂದಿರದ ಕಡೆಗೆ

ತುಳಸಿ ಫಿಲಂಸ್ ಲಾಂಛನದಲ್ಲಿ ಜೆ.ರಮೇಶ್‌ಕುಮಾರ್ ಜೈನ್ ನಿರ್ಮಾಣ ಮಾಡಿರುವ ‘ಬೆಳಕಿನಡೆಗೆ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

ಚಿತ್ರದ ವಿಶೇಷವೆಂದರೆ ಭಾರತ ಚಿತ್ರರಂಗದಲ್ಲೇ ಪ್ರಥಮ ಬಾರಿಗೆ ಡಾ:ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯನುಳ್ಳ ಹಾಡೊಂದನ್ನು ನಿರ್ಮಾಣ ಮಾಡಿರುವುದು. ಬಿ.ಜಯಶ್ರೀ ಹಾಗೂ ಲತಾ ಹಂಸಲೇಖರ ಕಂಠಸಿರಿಯಲ್ಲಿ ಈ ಗೀತೆ ಮಧುರವಾಗಿ ಮೂಡಿಬಂದಿದೆ. ಚಿತ್ರ ಈಗಾಗಲೇ ಜೈಪುರ, ಅಹಮದಾಬಾದ್ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.

ಕರಿಬಸವಯ್ಯ, ರಾಮಕೃಷ್ಣ, ಗುರುರಾಜ ಹೊಸಕೋಟೆ, ಕಾಶಿ, ಮೋಹನ್ ಜುನೇಜಾ, ಚಂಪಾ ಶೆಟ್ಟಿ, ಸುಚಿತ್ರ, ರಾಷ್ಟ್ರಪ್ರಶಸ್ತಿ ವಿಜೇತ ಮಾ:ಚಿರಂಜೀವಿ, ಮಾ: ಮಂಜುನಾಥ್, ಮಾ:ಶ್ಯಾಂ, ಮಾ:ಅರ್ಜುನ್, ಬೇಬಿ ಸಾನಿಯಾ ಅಯ್ಯರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಶಾಸಕ ಅಶ್ವತ್ ನಾರಾಯಣ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅಜಯ್‌ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಪ್ರಧಾನ ನಿರ್ದೇಶಕರು ಜೆ.ರಮೇಶ್‌ಕುಮಾರ್ ಜೈನ್. ಕುಮಾರ್‌ಈಶ್ವರ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿದೆ. ಶ್ರೀ ಸಂಕಲನ, ರೇವಣ್ಣ ಕಲಾ ನಿರ್ದೇಶನ ಹಾಗೂ ಸದಾರಾಘವ್- ಸಂತೋಷ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited