Untitled Document
Sign Up | Login    
Dynamic website and Portals
  
Home >> Movie Home >> ‘ಲೂಸುಗಳು’ ಚಿತ್ರಕ್ಕೆ ಭರ್ಜರಿ ಜನಪ್ರಿಯತೆ
‘ಲೂಸುಗಳು’ ಚಿತ್ರಕ್ಕೆ ಭರ್ಜರಿ ಜನಪ್ರಿಯತೆ
‘ಲೂಸುಗಳು’ ಚಿತ್ರಕ್ಕೆ ಭರ್ಜರಿ ಜನಪ್ರಿಯತೆ
ಲೂಸುಗಳು ಚ್ರಿತ್ರದಲ್ಲಿ ರೇಖಾ ವೇದವ್ಯಾಸ್

ಪ್ರೇಕ್ಷಕನ ಮುಂದೆ ಬರುವುದಕ್ಕೂ ಮುಂಚೆ ಭರ್ಜರಿ ತಯಾರಿ ನಡೆಸಿಕೊಳ್ಳುವುದು ಅಂದರೆ ಇದಪ್ಪ! ಹಲವು ಹೊಸ ಬಗೆಯಲ್ಲಿ ಈಗಾಗಲೇ ‘ಲೂಸುಗಳು’ ಚಿತ್ರ ಜನಪ್ರಿಯತೆ ಕಾಣುತ್ತಿದ್ದೆ. ಅದಕ್ಕೆ ಇನ್ನೆರಡು ಹೊಸದಾಗಿ ಸೇರ್ಪಡೆಯಾಗುತ್ತಿದೆ.

ಕಳೆದ ಶುಕ್ರವಾರ ನಡೆದ ‘ಬಿಗ್ ಬಾಸ್’ ಈ ಟಿ ವಿ ವಾಹಿನಿಯಲ್ಲಿ ಪ್ರಸಾರವಾದ ಈ ಕಾರ್ಯಕ್ರಮವನ್ನು 1.5 ಕೋಟಿ ಜನ ವೀಕ್ಷಿಸಿದರು ಎಂದು ಅಂದಾಜು ಮಾಡಲಾಗಿದೆ. ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಮೂರು ಹಾಡುಗಳನ್ನು ನೃತ್ಯದ ಮೂಲಕ ಮನರಂಜೆನೆಯ ಅಂಶವಾಗಿ ಸೇರ್ಪಡಿಸಲಾಗಿತ್ತು ಹಾಗೆಯೇ ‘ಲೂಸುಗಳು’ ಚಿತ್ರದ ನಟರುಗಳದ ಶ್ರೀ ಮುರಳಿ, ಐಶ್ವರ್ಯ ಹಾಗೂ ಅಕುಲ್ ಹಾಡಿನ ಭಾಗಕ್ಕೆ ಹೆಜ್ಜೆ ಹಾಕಿದರು.

ಮುಂದಿನ ಪ್ರಚಾರದ ವಿಚಾರದಲ್ಲಿ ‘ಲೂಸುಗಳು’ ತಂಡ ಈ ಟಿವಿ ಅಲ್ಲಿ ಪ್ರಸಾರ ಆಗುವ ‘ಮನೆ ಮುಂದೆ ಮಹಾಲಕ್ಷ್ಮಿ’ ರಿಯಾಲಿಟಿ ಗೇಮ್ ಶೋ ಅಲ್ಲಿ ಬಾಗವಹಿಸಲಿದ್ದು ಅಲ್ಲಿ ಗಳಿಸಿದ ಹಣವನ್ನು ಅಶಕ್ತರ ಪಾಲಿಗೆ ಸಂದಾಯಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ಅರುಣ್ ತಿಳಿಸಿದ್ದಾರೆ. ಮನೆ ಮುಂದೆ ಮಹಾಲಕ್ಷ್ಮಿ ಕಾರ್ಯಕ್ರಮವು ಚಿಕ್ಕನಾಯಕನಹಳ್ಳಿಯ ಒಂದು ಮನೆ ಮುಂದೆ ಚಿತ್ರೀಕರಣ ಮಾಡಲಾಗುವುದು. ಅದನ್ನೇ ಮುಂದಿನ ಶನಿವಾರ ಹಾಗೂ ಭಾನುವಾರ ಪ್ರಸಾರ ಮಾಡಲಾಗುವುದು.

ಅಂದಹಾಗೆ ಅರುಣ್ ನಿರ್ದೇಶನದ ‘ಲೂಸುಗಳು’ ಯು ಟ್ಯೂಬ್ ಅಲ್ಲಿ ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದೆ. ಚಿತ್ರದ ನಾಲ್ಕು ನಿಮಿಷದ ಸಂಭಾಷಣೆ ಮಾತ್ರ ಯು ಟ್ಯೂಬ್ ಅಲ್ಲಿ ಪ್ರಚಾರಕ್ಕಾಗಿ ಬಳಕೆ ಮಾಡಲಾಗಿರುವುದು.

ಕೌಂಟೀ ಫಿಲ್ಮ್ ಮಕೇರ್ಸ್ ಅವರ ‘ನಾವು ಲೂಸುಗಳು ನೀವು ಲೂಸುಗಳು’ ನಿರ್ಮಾಪಕ ಸಯ್ಯದ್ ಹುಸ್ಸೈನ್ ಅವರ ಪ್ರಥಮ ಚಿತ್ರ. ಕಾರ್ಯಕಾರಿ ನಿರ್ಮಾಪಕರಾಗಿ ಬಸವರಾಜ್ ಮಂಚಯ್ಯ ಅವರು ಕೈ ಜೋಡಿಸಿದ್ದಾರೆ. 18 ದಿವಸಗಳು ಬೆಂಗಳೂರಿನಲ್ಲಿ, 18 ದಿವಸ ಚಿತ್ರೀಕರಣ ಸಕ್ಲೆಶ್ಪುರದಲ್ಲಿ ಮಾತುಗಳ ಬಾಗದ ಚಿತ್ರೀಕರಣ ಮುಗಿಸಿ ಹಾಡುಗಳ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಿದ್ದಾರೆ.

ಇದೆ ಮೊದಲಬಾರಿಗೆ ಹೆಸರಾಂತ ನಟಿ ರೇಖ ವೇದವ್ಯಾಸ್ ಅವರು ಐಟೆಮ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೇಖ ಅವರ ಜೋಡಿ ಯಾಗಿ ಶ್ರೀ ಮುರಳಿ ಇದ್ದಾರೆ. ಶ್ರೀಕಿ ಜೊತೆ ಶ್ರಾವ್ಯ, ಅಕುಳ್ ಬಾಲಾಜಿ ಜೋಡಿಯಾಗಿ ಐಶ್ವರ್ಯ ನಾಗ್ ಅಭಿನಯಿಸಿದ್ದಾರೆ. ಶೋಬಿತ ರಾಯ್, ರವಿ ಚೇತನ್, ಪದ್ಮಜ ರಾವು, ಮಿಮಿಕ್ರಿ ದಯಾನಂದ, ರವಿ, ಹರೀಶ್, ವಿಜಯಸಾರತಿ ಅವರು ತಾರಾಗಣದಲ್ಲಿದಾರೆ.

ವಾಣಿ ಹರಿಕೃಷ್ಣ ಅವರಿಗೂ ಇದು ಚೊಚ್ಚಲ ಸಂಗೀತ ನಿರ್ದೇಶನ. ಚಿದಾನಂದ ಎಚ್. ಕೆ. ಅವರ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವು ಸಂಕಲನ ‘ಲೂಸುಗಳು’ ಚಿತ್ರಕ್ಕೆ ಮಾಡಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited