Untitled Document
Sign Up | Login    
ಆರ್.ಟಿ.ಇ ನಿಯಮ ಉಲ್ಲಂಘನೆ:ಅವಧಿಗೆ ಮುನ್ನವೇ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ


ಆರ್.ಟಿ.ಇ (ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ)ಯ ನಿಯಮ ಉಲ್ಲಂಘಿಸಿ ಅವಧಿಗೂ ಮುನ್ನವೇ ಕೆಲ ಖಾಸಗಿ ಶಾಲೆಗಳು ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿವೆ. ಈ ವಿಷಯ ಕೇಳಿದರೆ ಹೌದೇ ಎಂಬ ಪ್ರಶ್ನೆ ಮೂಡುತ್ತದೆಯಾದರೂ ಇದು ನಿಜ.

2014-15ನೇ ಶೈಕ್ಷಣಿಕ ಸಾಲಿನ ಆರ್.ಟಿ.ಇ ಸೀಟುಗಳಿಗೆ ನಿಯಮಾವಳಿ ಪ್ರಕಾರ ಜ.6ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಬೇಕು. ಆದರೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ನಿಯಮ ಉಲಂಘಿಸಿ, ಅವಧಿಗೂ ಮುನ್ನವೇ ಬೆಂಗಳೂರಿನ ಹಲವು ಖಾಸಗಿ ಶಾಲೆಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿವೆ.

ಪ್ರತಿಷ್ಠಿತ ಕೆಲ ಖಾಸಗಿ ಶಾಲೆಗಳಲ್ಲಂತೂ ಸೆಪ್ಟಂಬರ್ ತಿಂಗಳಾಂತ್ಯದಲ್ಲೇ ಎಲ್.ಕೆ.ಜಿ ಮತ್ತು 1ನೇ ತರಗತಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಸಂಬಂಧ ಚೈಲ್ಡ್ ಹೆಲ್ಪ್ ಲೈನ್ ಹಾಗೂ ಆರ್.ಟಿ.ಇ ಕಾರ್ಯಪಡೆಗೆ ಪೋಷಕರು ದೂರು ನೀಡಿದ್ದಾರೆ.

ಆರ್.ಟಿ.ಇ ನಿಯಮದ ಪ್ರಕಾರ ಜ.6ರಿಂದ 2014-15ನೇ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜ.7ರಿಂದ ಪೋಷಕರು ಅರ್ಜಿ ಸಲ್ಲಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಪೋಷಕರು ಆರ್.ಟಿ.ಇ ಮೀಸಲಾತಿ ಸೀಟಿಗೆ ಪ್ರವೇಶ ಪಡೆಯುವ ಆಕಾಂಕ್ಷೆಯಿಂದ ಸಮೀಪದ ಖಾಸಗಿ ಶಾಲೆಗಳಿಗೆ ತೆರಳಿ ಮಾಹಿತಿ ಪಡೆಯಲಾರಾಂಭಿಸಿದ್ದಾರೆ. ಈ ವೇಳೆ ಹಲವು ಪೋಷಕರಿಗೆ ತಪ್ಪು ಮಾಹಿತಿ ಲಭ್ಯವಾಗಿದೆ.
ಕೆಲ ಖಾಸಗಿ ಶಾಲೆಗಳು ಆರ್.ಟಿ. ಇಯಿಂದ ತಪ್ಪಿಸಿಕೊಳ್ಳಲು ನಮ್ಮ ಶಾಲೆ ಆರ್,.ಟಿ.ಇ ವ್ಯಾಪ್ತಿಗೆ ಬರುವುದಿಲ್ಲ, ಕಳೆದ ವರ್ಷವೂ ಆರ್.ಟಿ.ಇ ಯಾವುದೇ ಮೀಸಲಾತಿ ಸೀಟು ನೀಡಿಲ್ಲ. ಹೀಗಾಗಿ ಈಗಾಗಲೆ ನಮ್ಮ ಶಾಲೆಯಲ್ಲಿ ಎಲ್.ಕೆ.ಜಿ ಹಾಗೂ 1ನೇ ತರಗತಿಗಳಿಗೆ ದಾಖಲಾತಿ ಪೂರ್ಣಗೊಂಡಿದೆ ಎಂದು ಪೋಷಕರಿಗೆ ತಿಳಿಸಿದ್ದಾರೆ.

ಇನ್ನು ಕೆಲ ಶಾಲೆಗಳ್ಳು ಶೇ.25ರಷ್ಟು ಆರ್.ಟಿ.ಇ ಸೀಟುಗಳನ್ನು ಹೊರತುಪಡಿಸಿ ಉಳಿದ ಸೀಟುಗಳಿಗೆ ಮಾತ್ರ ಪ್ರವೇಶ ಆರಂಭಿಸಿರುವುದಾಗಿ ಸಮಜಾಯಿಷಿ ನೀಡುತ್ತಿವೆ.

ಈ ಬಗ್ಗೆ ಪೋಷಕರು ಶಾಲೆಗಳ ಹೆಳಿಕೆ ವಿರುದ್ಧ ಆರ್.ಟಿ.ಇಕಾರ್ಯಪಡೆಗೆ ದೂರು ನೀಡಿದ್ದು, ದೂರನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಕಳುಹಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಆರ್.ಟಿ.ಇ ಕಾರ್ಯಪಡೆ ಸಂಯೋಜನಾಧಿಕಾರಿ ನಾಗಸಿಂಹ ಜಿ.ರಾವ್, ಪ್ರತಿಷ್ಠಿತ ಖಾಸಗಿ ಶಾಲೆಗಳು ನಿಯಮ ಮೀರಿ ಪ್ರವೇಶ ಪ್ರಕ್ರಿಯೆ ಆರಂಭಿಸಿವೆ. ಇದರಿಂದ ಪೋಷಕರಿಗೆ ಆತಂಕ ಉಂಟಾಗಿದೆ. ತಮ್ಮ ಮಕ್ಕಲಿಗೆ ಆರ್,ಟಿ.ಇ ಅದಿ ಸಿಟು ಸಿಗಲಾರದೆಂಬ ಭಯದಲ್ಲಿದ್ದಾರೆ. ಸರ್ಕಾರ ಕೂಡಲೇ ಕ್ರಮ ಕೈಗೊಂಡು ಈಗಾಗಲೇ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿರುವುದನ್ನು ಅಸಿಂಧುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೋಷಕರ ದೂರು ಆದರಿಸಿ ನಿಯಮ ಉಲ್ಲಂಘಿಸಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿದೆ. ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

 

Author : ಲೇಖಾ ರಾಕೇಶ್

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited