Untitled Document
Sign Up | Login    
1 2 3 ವಿಷ್ಣುವರ್ಧನಾ.. ರಾಜ್ಯಕ್ಕೆ ರಾಜ ನಾನೆನಾ....

ಖುರ್ಚಿ ಆಟ !

ಚುನಾವಣಾ ಸರ್ಕಸ್ ಕೊನೆಗೂ ಮುಗಿದಿದೆ. ಜನ ಈ ಬಾರಿ 'ಕೈ’ ಗೆ 'ಜೈ’ ಎಂದಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗೆ ನಾಮುಂದು ತಾಮುಂದು ಎಂದು ಪೈಪೋಟಿ ನಡೀತಿದೆ. ಇತ್ತ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೋತು ಸುಣ್ಣವಾಗಿರುವುದು ಸಿದ್ದುಗೆ ವರವಾಗಿ ಎದುರಾಳಿ ಇಲ್ಲವೆಂಬಂತೆ ಬೀಗುತಿದ್ದಾರೆ. ಈ ಗ್ಯಾಪಲ್ಲಿ ಸಿದ್ದರಾಮಯ್ಯ ’1 2 3 ವಿಷ್ಣುವರ್ಧನಾ....’ದಾಟಿಯಲ್ಲಿ ಹಾಡುತ್ತಿದ್ದಾರೆ.

ಒಂದೇ ಒಂದು ಆಸೆ ನಂದು ಸಿಎಮ್ಮು ಖುರ್ಚಿಬೇಕು
ಮುಖ್ಯಮಂತ್ರಿ ಆಗೋದಕ್ಕೆ ಕನ್ನಡ ರಾಜ್ಯಸಾಕು
ಜೆಡಿಎಸ್ ಆಟಕ್ಕಿಲ್ಲ, ಬಿಜೆಪಿ ಲೆಕ್ಕಕ್ಕಿಲ್ಲ
ಹೇಳೊರಿಲ್ಲ ಕೆಳೊರಿಲ್ಲ ಕಾಂಗ್ರೆಸ್ ಒಂದೇ ರಾಜನು ii೧ii

ಒನ್ ಟೂ ಒನ್ ಕ್ಷೇತ್ರಗಳನ್ನಾ ಓಟಾಕಿ ಗೆಲ್ಸಿದಾ ಜನಾ
ಖುರ್ಚಿಗೆ ಇನ್ನು ರಾಜ ನಾ.. ಕೇಳ್ಕೊಂಡ್ ಹೋಗಿ..iiಪii

ಪಕ್ಷಾನೆ ದೇವರೆಂದರು, ಗೆದ್ದುಬಂದ ಲೀಡರೆಲ್ಲರೂ
ಖುರ್ಚಿಯ ಆಸೆಗಾಗಿ ಪಕ್ಷಕ್ಕೆ ದ್ರೋಹ ಬಗೆದರು
ನಾನೆಂದು ಖುರ್ಚಿಗಾಗಿ ಪಕ್ಷವನ್ನು ಬಿಟ್ಟು ಹೋಗೆನು
ಪಕ್ಷಾನೆ ಖುರ್ಚಿಕೊಡುವ ಸಮಯಕ್ಕೆ ನಾ ಕಾಯಲಾರೆನು

ನಾನೆ ಬೇರೆ, ಸ್ಟೈಲೆ ಬೇರೆ ನನ್ನ ದಾರಿ ಬೇರೆನೆ
ಎಲ್ಲದಕ್ಕೂ ಸಿದ್ದ ನಾನು ನಂಗೆ ಜನರ ಸಾತಿದೆ
ಸಿದ್ದು ಹೋಗೋ ದಾರಿಯಲ್ಲಿ ನೀವು ಫಾಲೋ ಮಾಡಿರಿ ii೨ii

ಒನ್ ಟೂ ಒನ್ ಕ್ಷೇತ್ರಗಳನ್ನಾ ಓಟಾಕಿ ಗೆಲ್ಸಿದಾ ಜನಾ
ಖುರ್ಚಿಗೆ ಇನ್ನು ರಾಜ ನಾ.. ಕೇಳ್ಕೊಂಡ್ ಹೋಗಿ..
ರಾಜ್ಯಕ್ಕೆ ರಾಜನಾಗಲು ಯಾರ ಅಪ್ಪಣೆ ಕೇಳಲಾರೆನು
ರಾಜ್ಯದ ಖಜಾನೆ ತೆರೆಯಲು ಯಾರಿಗಾಗಿಯೂ ಕಾಯಲಾರೆನು
ಪಕ್ಷಕ್ಕೆ ಯಾರೇ ಬಂದರೂ ನನ್ನ ಮಾತನು ಮೀರಲಾರರು
ಸೋನಿಯಾ ಏನೆ ಎಂದರೂ ಡೋಂಟು ಕೇರು ಎಂದು ಬಿಡುವೆನು

ಪಕ್ಷ ತುಂಬಾ ದೊಡ್ಡದಂತೆ ಅಂದುಕೊಂಡ್ರೆ ಚಿಕ್ಕದು
ಖುರ್ಚಿ ತುಂಬಾ ಚಿಕ್ಕದಂತೆ ಅಂದುಕೊಂದ್ರೆ ದೊಡ್ಡದು
ಹೆಸರಿನಲ್ಲೇ ದಾದಾ ನಾನು ನಿಮಗೆ ಎಲ್ಲಾ ಗೊತ್ತಿದೆ.

ಒಂದೇ ಒಂದು ಆಸೆ ನಂದು ಸಿಎಮ್ಮು ಖುರ್ಚಿಬೇಕು
ಮುಖ್ಯಮಂತ್ರಿ ಆಗೋದಕ್ಕೆ ಕನ್ನಡ ರಾಜ್ಯ ಸಾಕು
ಜೆಡಿಎಸ್ ಆಟಕ್ಕಿಲ್ಲ, ಬಿಜೆಪಿ ಲೆಕ್ಕಕ್ಕಿಲ್ಲ
ಹೇಳೊರಿಲ್ಲ ಕೆಳೊರಿಲ್ಲ ಕಾಂಗ್ರೆಸ್ ಒಂದೇ ರಾಜನು ii೩ii

ಒನ್ ಟೂ ಒನ್ ಕ್ಷೇತ್ರಗಳನ್ನಾ ಓಟಾಕಿ ಗೆಲ್ಸಿದಾ ಜನಾ
ಖುರ್ಚಿಗೆ ಇನ್ನು ರಾಜ ನಾ ಕೇಳ್ಕೊಂಡ್ ಹೋಗಿ iiಪii

 

Author : -ಚಂದ್ರಲೇಖಾ ರಾಕೇಶ್ ಹಾಗೂ ಭರತ್ ಎಸ್ .

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited