ಪೆನುಕೊಂಡ : ಚಲಿಸುತ್ತಿದ್ದ ರೈಲಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಟ್ಟು 6 ಜನರು ಸಾವಿಗೀಡಾಗಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರ ಬೆಳಗಿನ ಜಾವ ಈ ಘಟನೆಯ ವರದಿಯಾಗಿದೆ.
ಮೃತ ಪಟ್ಟ 6 ಜನರಲ್ಲಿ ಕರ್ನಾಟಕದ ದೇವದುರ್ಗದ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಅವರೂ ಸೇರಿದ್ದಾರೆ.
ಅನಂತಪುರಂ ಜಿಲ್ಲೆಯ ಪೆನುಕೊಂಡ ಬಳಿ ರೈಲ್ವೆ ಕ್ರಾಸಿಂಗ್ ನಲ್ಲಿ ಗ್ರಾನೈಟ್ ಹೊತ್ತ ಲಾರಿ ನಿಯಂತ್ರಣ ತಪ್ಪಿ ರೈಲಿನ ಎಸಿ ಬೊಗಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.
ರೈಲಿನ 6 ಜನ ಪ್ರಯಾಣಿಕರು ಮತ್ತು ಲಾರಿಯ ಚಾಲಕ ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ, ಎರಡು ಬೋಗಿಗಳು ಹಳಿ ತಪ್ಪಿವೆ. ಈ ಘಟನೆಯಿಂದಾಗಿ ಬೆಂಗಳೂರು-ಗುಂಟಕಲ್ ರೈಲು ಮಾರ್ಗದಲ್ಲಿ ಅಡಚನೆಯುಂಟಾಗಿದೆ.