ಪಂಜಾಬ್ : ಕಾಶ್ಮೀರ ಮುಸಲ್ಮಾನರು ಅಮರನಾಥ್ ಯಾತ್ರಿಕರಿಗೆ ಕಿರುಕುಳ ನೀಡುತ್ತಿದ್ದ ಹಿನ್ನಲೆಯಲ್ಲಿ, ಶಿವ ಸೇನಾ ಕಾರ್ಯಕರ್ತರು, ಜಮ್ಮು ಮತ್ತು ಕಾಶ್ಮೀರ ಕಡೆಗೆ ಹೋಗುತ್ತಿದ್ದ ಲಾರಿಗಳನ್ನು ತಡೆದು ಕಾಶ್ಮೀರಿ ಮುಸ್ಲೀಂ ಚಾಲಕರಿಗೆ ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಹೇಳುವಂತೆ ಒತ್ತಾಯಿಸುತ್ತಿದ್ದಾರೆ.
ಪಂಜಾಬ್ ಘಟಕದ ಶಿವ ಸೇನಾ ಕಾರ್ಯಕರ್ತರು ಜಮ್ಮು ಮತ್ತು ಕಾಶ್ಮೀರ ಕಡೆಗೆ ಹೋಗುತ್ತಿದ್ದ ಲಾರಿಗಳನ್ನು ದಾರಿಯಲ್ಲಿ ತಡೆದು ಕಾಶ್ಮೀರಿ ಮುಸ್ಲಿಂ ಚಾಲಕರಿಂದ ‘ಭಾರತ್ ಮಾತಾ ಕೀ ಜೈ’, ‘ಪಾಕಿಸ್ತಾನ್ ಮುರ್ದಾಬಾದ್’ ಎಂದು ಘೊಷಣೆ ಕೂಗಿಸಿದ್ದಾರೆ.
ಘೊಷಣೆ ಕೂಗಲು ನಿರಾಕರಿಸಿದ ಕೆಲವು ಲಾರಿ ಚಾಲಕರಿಗೆ ಥಳಿಸಿ ಪಾಕಿಸ್ತಾನದ ಧ್ವಜವನ್ನು ಸುಡುವಂತೆ ಹೇಳಿದ ಘಟನೆಯೂ ನಡೆದಿದೆ ಎಂದು ತಿಳಿದುಬಂದಿದೆ.
ಪಂಜಾಬ್ನ ಶಿವ ಸೇನಾ ಮುಖ್ಯಸ್ಥ ರಾಜೀವ್ ತಂಡೋನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಶ್ಮೀರಿ ಮುಸಲ್ಮಾನರು ಅಮರನಾಥ ಯಾತ್ರಿಗಳಿಗೆ ಕಿರುಕುಳ ನೀಡಿದ್ದು, ಇದಕ್ಕೆ ಪ್ರತಿಯಾಗಿ ಅದೇ ರೀತಿ ಅವರಿಗೂ ಮಾಡಲಾಗಿದೆ. ಆದರೆ ನಾವು ಕೇವಲ ಭಾರತ್ ಮಾತಾ ಕೀ ಜೈ, ಪಾಕಿಸ್ತಾನ್ ಮುರ್ದಾಬಾದ್ ಎಂದಷ್ಟೇ ಘೊಷಣೆಗೆ ಒತ್ತಾಯಿಸಿದ್ದೇವೆ ಎಂದು ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.