ಬೆಂಗಳೂರು : ರೈಲು ಹಳಿಯ ಮೇಲೆ ನಿಂತು ಸೆಲ್ಫಿ ತೆಗೆಯಲು ಹೋಗಿ ಮೂವರು ಯುವಕರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಧಾರುಣ ಘಟನೆ ಬಿಡದಿ ಬಳಿಯ ವಂಡರ್ ಲಾ ಗೇಟ್ ಬಳಿ ನಡೆದಿದೆ.
ಬೆಳಗ್ಗೆ 9 ಗಂಟೆಗೆ ಬಿಡದಿ ಬಳಿಯ ವಂಡರ್ ಲಾ ಸಮೀಪ ಮಂಚನಾಯಕನ ಹಳ್ಳಿ ಬಳಿಯ ಹಳಿಗಳ ಮೇಲೆ ನಿಂತು ಮೂವರು ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು. ಈ ವೇಳೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ರೈಲು ಮೂವರ ಮೇಲೆಯೇ ಹರಿದಿದೆ. ಪರಿಣಾಮ ಸ್ಥಳದಲ್ಲೇ ಯುವಕರ ದೇವ ಛಿದ್ರ ಛಿದ್ರಗೊಂಡಿದೆ.
ಸ್ಥಳಕ್ಕೆ ಬಿಡದಿ ಹಾಗೂ ಚೆನ್ನಪಟ್ಟಣ ರೈಲ್ವೇ ಪೊಲೀಸರು ದೌಡಾಯಿಸಿದ್ದು ,ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಯುವಕರ ಗುರುತು ಪತ್ತೆಯಾಗಿಲ್ಲ. ಆದರೆ ಸ್ಥಳದಲ್ಲಿ ಎರಡು ಬೈಕ್ ಗಳು ಪತ್ತೆಯಾಗಿವೆ.