Untitled Document
Sign Up | Login    
Dynamic website and Portals
  
June 17, 2015

ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್: ನಿರ್ಮಾಪಕರ ಬಗ್ಗೆ ಅಂಬರೀಶ್ ವ್ಯಂಗ್ಯ

ಕಲಾವಿದರ ಸಂಘದ ಅಧ್ಯಕ್ಷ ಹಾಗೂ ಸಚಿವ ಅಂಬರೀಶ್ ಕಲಾವಿದರ ಸಂಘದ ಅಧ್ಯಕ್ಷ ಹಾಗೂ ಸಚಿವ ಅಂಬರೀಶ್

ಬೆಂಗಳೂರು : ಕನ್ನಡ ಚಿತ್ರರಂಗದ ನಿರ್ಮಾಪಕರುಗಳ ಧರಣಿ ಇನ್ನಷ್ಟು ಭುಗಿಲೆದ್ದಿದ್ದು, ಈ ಸಂಬಂಧ ಮಾತನಾಡಿದ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಅವರ ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್ (ಬಿಕ್ಷುಕರಿಗೆ ಯಾವುದೇ ಆಯ್ಕೆ ಇಲ್ಲ) ಎಂಬ ವಿವಾದಾತ್ಮಕ ಹೇಳಿಕೆ ನಿರ್ಮಾಪರ ಆಕ್ರೋಶಕ್ಕೆ ಕಾರಣವಾಗಿದೆ.

ಕಲಾವಿದರ ಸಂಘದಿಂದ ನಮ್ಮ ಸಮಸ್ಯೆಗಳಿಗೆ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಆರೋಪಿಸಿ ಕನ್ನಡ ಚಿತ್ರರಂಗದ ನಿರ್ಮಾಪಕರು ಕಳೆದ ಹದಿನೇಳು ದಿನಗಳಿಂದ ಧರಣಿ ನಡೆಸುತ್ತಿದ್ದು, ಅಂಬರೀಶ್ ಅವರ ವಿವಾದಾತ್ಮಕ ಹೇಳಿಕೆ ನಿರ್ಮಾಪಕರ ಸಹನೆ ಕೆಡುವಂತೆ ಮಾಡಿದೆ.

ತಮ್ಮ ಬಳಿಗೆ ಚರ್ಚಿಸಲು ಬಂದಿದ್ದ ನಿರ್ಮಾಪಕರಾದ ಮುನಿರತ್ನ ಹಾಗೂ ಕೆ.ಮಂಜು ಚರ್ಚಿಸಿದ ಬಳಿಕ ಮಾತನಾಡಿದ ಅಂಬರೀಶ್, ನನ್ನ ಕೆಲಸಕ್ಕಾಗಿ ಬಂದಿದ್ದಲ್ಲ. ಈಗ ನನ್ನ ವೃತ್ತಿಯೂ ಅದಲ್ಲ, ನಾನು ಬಂದಿದ್ದು ಚಿತ್ರರಂಗಕ್ಕೋಸ್ಕರ, ಈಗ ಸಮಸ್ಯೆ ಇರುವರು ಯಾರು? ಸಮಸ್ಯೆ ಇರುವರು ಅಲ್ಲಿ ಕೂಡಾಗುತ್ತಿದ್ದಾರೆ. ಹಿಂದೆ ಬಿಕ್ಷುಕರಿಗೆ 1 ರುಪಾಯಿ ಕೊಟ್ರೆ ಸುಮ್ಮನೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ, 10 ರುಪಾಯಿ ಕೊಡಬೇಕು. ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್, ಬೆಗ್ಗರ್ಸ್ ಆರ್ ನಾಟ್ ಚೂಸರ್ಸ್ ಎಂದು ವ್ಯಂಗ್ಯವಾಡಿದ್ದಾರೆ.

ಕಲಾವಿದರ್ಯಾರು ನಿರ್ಮಾಪಕರ ಬಳಿಗೆ ಹೋಗುವುದಿಲ್ಲ ನಿರ್ಮಾಪಕರೇ ಕಲಾವಿದರ ಬಳಿ ಬರುತ್ತಾರೆ. ಸಮಸ್ಯೆಗಳಿರುವ ಜನ ಈಗ ಪ್ರತಿಭಟನೆ ನಡೆಸುತ್ತಿದ್ದಾರೆ ಅವರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವತ್ತ ಯೋಚಿಸಬೇಕು ಎಂದು ನಿರ್ಮಾಪಕರ ವಿರುದ್ಧ ಕಿಡಿಕಾರಿದ್ದಾರೆ.

ಸಚಿವ ಅಂಬರೀಶ್ ಅವರು, ಇಂತಹ ಹೇಳಿಕೆಗಳನ್ನು ನೀಡಿದರೂ, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹಾಗೂ ಕೆ.ಮಂಜು ಅವರು ಸುಮ್ಮನಿರುವುದು ಏಕೆ ಎಂದು ಧರಣಿ ನಿರತ ನಿರ್ಮಾಪಕರು ಪ್ರಶ್ನಿಸಿದ್ದಾರೆ. ಅಲ್ಲದೇ ಒಬ್ಬ ಹಿರಿಯ ಕಲಾವಿದರಾಗಿ, ಹಿರಿಯ ಸಚಿವರಾಗಿ ಇಂತಹ ಹೇಳಿಕೆಗಳನ್ನು ನೀಡುವುದು ಅಂಬರೀಶ್ ಗೆ ಶೋಭೆತರುವುದಿಲ್ಲ ಎಂದು ಕಿಡಿಕಾರಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Entertainment

  • ಜುಲೈ 28 ರಿಂದ ಚೆನ್ನೈನಲ್ಲಿ ಕನ್ನಡ ಚಲನಚಿತ್ರೋತ್ಸವ
  • ಕನ್ನಡ ಚಲನಚಿತ್ರೋತ್ಸವವನ್ನು ಜುಲೈ 28 ರಿಂದ 31 ರವರೆಗೆ ಚೆನ್ನೈನ ಅಲುವಾರ್ ಪೇಟ್‍ನ ಕಸ್ತೂರಿ ರಂಗ ರಸ್ತೆಯಲ್ಲಿರುವ ರಷ್ಯನ್ ಸೆಂಟರ್ ಆಫ್ ಸೈನ್ಸ್ ಅಂಡ್ ಕಲ್ಚರ್ ನಲ್ಲಿ ಏರ್ಪಡಿಸಲಾಗಿದೆ.
  • ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಬಾಲಿವುಡ್ ನಲ್ಲಿ ಮನಮೋಹನ್ ಸಿಂಗ್ ಕುರಿತು ಚಿತ್ರ ನಿರ್ಮಾಣ
  • 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited