ಶ್ರೀನಗರ : ಸುಬ್ರಹ್ಮಣನ್ ಸ್ವಾಮಿ ಅವರ ವಿವಾದಾತ್ಮಕ ಹೇಳಿಕೆ ಎರಡು ಸಮುದಾಯಗಳ ನಡುವೆ ಘರ್ಷಣೆಯನ್ನುಂಟು ಮಾಡುತ್ತದೆ ಎಂದು ಪಿಡಿಪಿ ಹೇಳಿದೆ.
ಗುವಾಹಟಿಯಲ್ಲಿ ಹಾಜರಿದ್ದ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು, ಮಸೀದಿ ಎಂಬುದು ಧಾರ್ಮಿಕ ಸ್ಥಳವಲ್ಲ, ಇದೊಂದು ಕಟ್ಟಡವಷ್ಟೇ. ಈ ಕಟ್ಟಡ ಯಾವಾಗ ಬೇಕಾದರು ಕೆಡವಬಹುದು. ನನ್ನ ಈ ಹೇಳಿಕೆಗೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ, ಚರ್ಚಿಸಲು ನಾನು ಸಿದ್ಧನಿದ್ದೇನೆ. ಏಕೆಂದರೆ ಈ ಮಾಹಿತಿ ನನಗೆ ಸೌದಿ ಅರೇಬಿಯಾದ ಜನರಿಂದಲೇ ತಿಳಿದುಬಂದಿದ್ದು ಎಂದು ವಿವಾದ್ಮಕ ಹೇಳಿಕೆಯೊಂದನ್ನು ನೀಡಿದ್ದರು.
ಸುಬ್ರಹ್ಮಣ್ಯನ್ ಸ್ವಾಮಿ ಅವರ ಈ ಹೇಳಿಕೆ ದೇಶಾದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ವಿವಾದ ಕುರಿತಂತೆ ಪಿಡಿಪಿಯ ವಕ್ತಾರ ನಯೀಮ್ ಅಖ್ತರ್ ಪ್ರತಿಕ್ರಿಯೆ ನೀಡಿದ್ದು, ಸುಬ್ರಹ್ಮಣ್ಯನ್ ಸ್ವಾಮಿ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಉನ್ನತ ಸ್ಥಾನದಲ್ಲಿರುವಂತ ಅಧಿಕಾರಿಗಳು ಈ ರೀತಿಯ ಹೇಳಿಕೆ ನೀಡುವುದು ತಪ್ಪು. ಈ ರೀತಿಯ ಹೇಳಿಕೆಗಳು ಸಮುದಾಯಗಳ ನಡುವೆ ದಂಗೆ ಏರ್ಪಡುವಂತೆ ಮಾಡುತ್ತದೆ. ಈ ಹೇಳಿಕೆಯನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸುವಂತೆ ಮನವಿ ಇಡಲಾಗುವುದು ಎಂದು ಹೇಳಿದ್ದಾರೆ.