Untitled Document
Sign Up | Login    
Dynamic website and Portals
  
November 28, 2015

ಭಾರತದ ಎಲ್ಲಾ ಸೇನೆ ಜೊತೆಗೂಡಿದರೂ ಭಯೋತ್ಪಾದಕರಿಂದ ಕಾಶ್ಮೀರ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ : ಫಾರೂಕ್ ಅಬ್ದುಲ್ಲಾ

ಫಾರೂಕ್ ಅಬ್ದುಲ್ಲಾ (ಫೈಲ್ ಚಿತ್ರ) ಫಾರೂಕ್ ಅಬ್ದುಲ್ಲಾ (ಫೈಲ್ ಚಿತ್ರ)

ಜಮ್ಮು : ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದಲ್ಲಿದೆ ಮತ್ತು ಜಮ್ಮು ಕಾಶ್ಮೀರ ಭಾರತದಲ್ಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಶನಿವಾರ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಭಾರತದ ಇಡೀ ಸೇನೆ ಜೊತೆಗೂಡಿದರೂ, ಭಯೋತ್ಪಾದಕರು ಮತ್ತು ಉಗ್ರಗಾಮಿಗಳಿಂದ ಜಮ್ಮು - ಕಾಶ್ಮೀರವನ್ನು ರಕ್ಷಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊೞಲು ಹೋದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಶನಿವಾರ ಮತ್ತೆ ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದಲ್ಲಿದೆ ಮತ್ತು ಜಮ್ಮು ಕಾಶ್ಮೀರ ಭಾರತದಲ್ಲಿದೆ, ಇದು ನಾನು ಹೊಸದಾಗಿ ಹೇಳುತ್ತಿರುವುದಲ್ಲ. ಭಾರತದ ಇಡೀ ಸೇನೆ ಜೊತೆಗೂಡಿದರೂ, ಭಯೋತ್ಪಾದಕರು ಮತ್ತು ಉಗ್ರಗಾಮಿಗಳಿಂದ ಜಮ್ಮು - ಕಾಶ್ಮೀರವನ್ನು ರಕ್ಷಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು ಎಂದು ಮಾಧ್ಯಮ ವರದಿ ತಿಳಿಸಿದೆ.

ಮಗ ಓಮರ್ ಅಬ್ದುಲ್ಲಾ ಸಹ ತಂದೆಯನ್ನು ಸಮರ್ಥಿಸಿಕೊಂಡಿದ್ದು, ಬಹಳ ವರ್ಷಗಳಿಂದ ತಮ್ಮ ತಂದೆ ಇದನ್ನೇ ನಂಬಿದ್ದಾರೆ ಎಂದು ಹೇಳಿದ್ದಾರೆ. ಪ್ರಾದೇಶಿಕ ವಿವಾದಗಳನ್ನು ಕೇಂದ್ರೀಕರಿಸುವ ಬದಲು ಜನರ ಮಧ್ಯೆ ಮಾತುಕತೆಗೆ ಅವಕಾಶ ಹೆಚ್ಚಿಸಿದರೆ ಮಾತ್ರ ಭಯ ಮಾಯವಾಗಲು ಸಾಧ್ಯ ಎಂದು ಅಬ್ದುಲ್ಲ ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited