ಖತಾರ್ : ಕೇಂದ್ರ ಎನ್.ಡಿ.ಎ ಸರ್ಕಾರ ಕೈಗೊಂಡ ಭ್ರಷ್ಟಾಚಾರ ನಿಯಂತ್ರಣ ಮತ್ತು ಮತ್ತು ಹಣಕಾಸಿನ ಪಾರದರ್ಶಕ ವ್ಯವಹಾರದಿಂದಾಗಿ ವಾರ್ಷಿಕ 36 ಸಾವಿರ ಕೋಟಿ ರೂ. ಉಳಿತಾಯವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಖತಾರ್ ನಲ್ಲಿ ಭಾರತೀಯ ಸಮುದಾಯಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವರು ಸಹಿ ತಿನ್ನುವ ಭಾಗ್ಯ ಕೈತಪ್ಪಿದೆ ಎಂದು ಎಂದು ಹೇಳಿದರು.
ಆರಂಭಿಕ ಹಂತದ ಭ್ರಷ್ಟಾಚಾರವನ್ನಷ್ಟೇ ನಾವು ತಡೆಗಟ್ಟಿದ್ದೇವೆ. ಆದರೆ ಸಂಪೂರ್ಣ ನಿಯಂತ್ರಣಕ್ಕೆ ಇನ್ನಷ್ಟು ಕೆಲಸ ಬಾಕಿಯಿದೆ ಎಂದ ಅವರು, ನಾವು ಕೇವಲ ಮೇಲ್ಭಾಗವನ್ನು ಮಾತ್ರ ಈಗ ಶುಚಿಗೊಳಿಸಿದ್ದವೇ. ತಳಭಾಗ ಇನ್ನೂ ಬಾಕಿ ಇದೆ. ಹೀಗೆ ಮಾಡಿದ್ದರಿಂದ ಹಲವು ಸಮಸ್ಯೆಗಳು ಎದುರಾದವು. ಆದರೆ 125 ಕೋಟಿ ಮಂದಿ ಭಾರತೀಯರ ಪ್ರೀತಿ ನಮಗಿದನ್ನು ಎದುರಿಸುವ ಶಕ್ತಿ ನೀಡಿತು ಎಂದು ಹೇಳಿದರು.
ಇದೇ ವೇಳೆ ನಕಲಿ ರೇಶನ್ ಕಾರ್ಡ್ ರದ್ದು, ಅವ್ಯವಹಾರ ತಡೆಗೆ ಕೈಗೊಂಡ ಕಠಿಣ ಕ್ರಮವು ಕೆಲವರಿಗೆ ಸಂಕಷ್ಟ ತಂದೊಡ್ಡಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ನ್ನು ಟೀಕಿಸಿದರು.