ಖತಾರ್ : ಭಾರತ ಅವಕಾಶಗಳ ನಾಡು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ.
ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ತೈಲ ರಾಷ್ಟ್ರ ಖತಾರ್ ಗೆ ಭೇಟಿ ನೀಡಿದ್ದು, ಅಲ್ಲಿನ ವಾಣಿಜ್ಯೋದ್ಯಮಿಗಳ ಜೊತೆಗೆ ಸಭೆ ನಡೆಸಿದರು. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಾಣಿಜ್ಯೋದ್ಯಮಿಗಳಿಗೆ ವಿವರಿಸಿದರು.
ಇದೇ ವೇಳೆ ಅಮೇರಿ ದಿವಾನ್ನಲ್ಲಿ ಪ್ರಧಾನಿ ಮೋದಿ ಅವರಿಗೆಭವ್ಯ ನಾಗರೀಕ ಸನ್ಮಾನ ಮಾಡಲಾಯಿತು. ಅಲ್ಲಿನ ಅಧಿಕಾರಿಗಳ ನಿಯೋಗದೊಂದಿಗೆ ಸಭೆ ನಡೆಸಿದ ಮೋದಿ, ಕೃಷಿ ಸಂಸ್ಕರಣೆ, ರೈಲ್ವೆ, ಮತ್ತು ಸೌರ ಇಂಧನ ಕ್ಷೇತ್ರಗಳು ಖತಾರ್ ಉದ್ಯಮಿಗಳಿಗೆ ಬಂಡವಾಳ ಹೂಡಿಕೆಗೆ ಅತ್ಯುತ್ತಮ ಕ್ಷೇತ್ರಗಳಾಗಿವೆ ಎಂದರು. ಭಾರತ-ಖತಾರ್ ಎರಡೂ ದೇಶಗಳ ನಡುವೆ ಕೌಶಲಾಭಿವೃದ್ಧಿ,ಶೃಮಿಕ ವರ್ಗದ ಅನೂಕೂಲ, ಅವಕಾಶ ವಿಸ್ತರಣೆಗಳು, ಉದ್ಯೋಗಾವಕಾಶಗಳ ಕುರಿತು ವಿವರಣೆ ನೀಡಿದರು.
ಭಾರತದ 80 ಕೋಟಿ ಯುವಕರು ರಾಷ್ಟ್ರದ ಅತ್ಯಂತ ದೊಡ್ಡ ಶಕ್ತಿ. ಮೂಲ ಸವಲತ್ತು ವಿಸ್ತರಣೆ ಮತ್ತು ಮೇಲ್ದರ್ಜೆಗೆ ಏರಿಸುವುದು ಹಾಗೂ ಉತ್ಪಾದನೆ ನಮ್ಮ ಆದ್ಯತೆಗಳು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.