ಸಿಯೋಲ್ : ರಾಮಾಯಣದ ರಾವಣ ಮತ್ತು ಆತನ ಪತ್ನಿ ಮಂಡೋದರಿ ಉತ್ತರಪ್ರದೇಶ ಮೂಲದ ದಲಿತರು ಎನ್ನುವ ಮೂಲಕ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿವಾದಕ್ಕೆ ಕಾರಣರಾಗಿದ್ದಾರೆ.
ಬನಾರಸ್ ಹಿಂದು ವಿವಿಯಲ್ಲಿ ನಡೆದ 'ಐ ಆಂಡ್ ಮೈ ಇಂಡಿಯಾ' ಉಪನ್ಯಾಸದಲ್ಲಿ ಮಾತನಾಡಿದ ಅವರು, ರಾವಣ ಘಾಜಿಯಾಬಾದ್ ಸಮೀಪದ ಬಸ್ರಖ್ನಲ್ಲಿ ಜನಿಸಿದ. ಮಂಡೋದರಿ ಮೇರಸ… ಭಾಗದಲ್ಲಿ ಜನಿಸಿದರು. ಶಿವನ ಆಶೀರ್ವಾದದ ನಂತರ ಕುಬೇರನನ್ನು ಕೆಳಗಿಳಿಸಿ ರಾವಣ ಲಂಕೆಯ ಅಧಿಪತಿಯಾದನು ಎಂದು ಹೇಳಿದರು. ರಾವಣನು ಬ್ರಾಹ್ಮಣ ಎಂದು ಇದುವರೆಗೆ ಪ್ರತೀತಿ ಇದೆ ಎಂದರು
ಬ್ರಿಟಿಷರಿಂದ ರಚಿತವಾದ ಇತಿಹಾಸ ಪುಸ್ತಕಗಳಲ್ಲಿ ವಾಸ್ತವ ಘಟನಾವಳಿಗಳೆಲ್ಲವನ್ನೂ ತಿರುಚಲಾಗಿದೆ. ಈ ಪುಸ್ತಕಗಳೆಲ್ಲವನ್ನೂ ಬದಲಾಯಿಸಿ ಎಂದು ಆಗ್ರಹಿಸಿದರು.