Untitled Document
Sign Up | Login    
Dynamic website and Portals
  
December 24, 2014

ಮಾಳವೀಯಾಗೆ ಭಾರತ ರತ್ನ: ಇತಿಹಾಸಕಾರ ರಾಮಚಂದ್ರ ಗುಹಾರಿಂದ ಆಕ್ಷೇಪ

ಮಾಳವೀಯಾ ಅವರಿಗೆ ಭಾರತ ರತ್ನ ನೀಡಿದರೆ ಸ್ವಾಮಿ ವಿವೇಕಾನಂದರಿಗೇಕಿಲ್ಲ? - ಗುಹಾ ಪ್ರಶ್ಣೆ

ಇತಿಹಾಸಕಾರ  ರಾಮಚಂದ್ರ ಗುಹಾ ಇತಿಹಾಸಕಾರ ರಾಮಚಂದ್ರ ಗುಹಾ

ನವದೆಹಲಿ : ಅಟಲ್ ಬಿಹಾರಿ ವಾಜಪೇಯಿ ಹಾಗೂ ಮದನ್ ಮೋಹನ್ ಮಾಳವೀಯ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದಕ್ಕೆ ಸಮಾಜಕಲ್ಯಾಣ ಇಲಾಖೆ ಸಚಿವ ಆಂಜನೇಯ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮಾಳವೀಯಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದಕ್ಕೆ ಇತಿಹಾಸಕಾರ ರಾಮಚಂದ್ರ ಗುಹ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಿದ ಮದನ್ ಮೋಹನ್ ಮಾಳವೀಯ ಅವರಿಗೆ ಭಾರತ ರತ್ನ ನೀಡುವ ಮೂಲಕ ನರೇಂದ್ರ ಮೋದಿ ಸರ್ಕಾರ ತಪ್ಪು ಮಾಡಿದೆ ಎಂದು ಗುಹ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ನೀಡಿರುವುದು ಸರಿ, ಆದರೆ ಹಲವು ವರ್ಷಗಳ ಹಿಂದೆಯೇ ಮೃತಪಟ್ಟ ಮದನ್ ಮೋಹನ ಮಾಳವೀಯ ಅವರಿಗೆ ಭಾರತ ರತ್ನ ನೀಡುವುದು ಸರಿಯಲ್ಲ ಎಂದು ಗುಹಾ ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಳವೀಯ ಅವರಿಗೆ ಭಾರತ ರತ್ನ ನೀಡಿರುವುದು ಸರಿಯಾದರೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ನಿಧನರಾಗಿದ್ದ ಸ್ವಾಮಿ ವಿವೇಕಾನಂದ, ಠಾಗೂರ್, ತಿಲಕ್, ಗೋಖಲೆ, ಅಕ್ಬರ್, ಶಿವಾಜಿ, ಗುರು ನಾನಕ್, ಕಬೀರ್, ಅಶೋಕ ಸೇರಿದಂತೆ ಹಲವರಿಗೆ ಭಾರತ ರತ್ನ ನೀಡಬಹುದು ಎಂದು ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited