ಬೆಂಗಳೂರು : ಸರ್ಕಾರಿ ವೈದ್ಯರು ಹಾಗೂ ರಾಜ್ಯ ಸರ್ಕರದ ನಡುವಿನ ಜಟಾಪಟಿ ತಾರಕಕ್ಕೇರಿದೆ. ಒಂದೆಡೆ ವೈದ್ಯರು ಬೇಡಿಕೆ ಈಡೇರಿಕಾಗಿ ಸಮೂಹಿಕ ರಾಜೀನಾಮೆ ನೀಡಿದ್ದರೆ ಇನ್ನೊಂದೆಡೆ ಸರ್ಕಾರ ಇದೆ ಎಂಬುದನ್ನು ನಾವು ತೋರಿಸುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಸರ್ಕಾರಿ ವೈದ್ಯರು ಬೆಂಗಳೂರಿನ ಆನಂದರಾವ್ ಸರ್ಕಲ್ ಬಳಿ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಛೇರಿಗೆ ಸರತಿ ಸಾಲಿನಲ್ಲಿ ಬಂದು ರಾಜೀನಾಮೆ ಸಲ್ಲಿಸಲ್ಲಿಸಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಈ ಮಧ್ಯೆ ವಿಕಾಸಸೌಧದಲ್ಲಿ ಸಭೆ ನಡೆಸಿದ ಸಚಿವ ಯು.ಟಿ.ಖಾದರ್, ಅ.28ರಂದು ಸರ್ಕಾರಿ ವೈದ್ಯರ ಸಭೆ ಕರೆಯಲಾಗಿತ್ತು. ಆದಾಗ್ಯೂ ವೈದ್ಯರು ಪಟ್ತು ಹಿಡಿದು ಮುಷ್ಕರ ನಡೆಸುತ್ತಿದ್ದಾರೆ. ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದರೆ ನೀಡಲಿ. ಸರ್ಕಾರ ಇದೆ ಎಂಬುದನ್ನು ನಾವೂ ತೋರಿಸುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರಿ ವೈದ್ಯರು ಈ ರೀತಿ ಬ್ಲ್ಯಾಕ್ ಮೇಲ್ ಮಾಡುವುದನ್ನು ನಿಲ್ಲಿಸಲಿ. ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದು, ಸಹಾಯವಾಣಿ ಮೂಲಕ ಚಿತ್ಸೆ ನೀಡುವುದಾಗಿ ತಿಳಿಸಿದರು.
ಈ ನಡುವೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲವಾದಲ್ಲಿ ರಾಜೀನಾಮೆ ಅಂಗೀಕರಿಸಬೇಕು ಎಂದು ಪಟ್ಟು ಹಿಡಿದಿರುವ ವೈದ್ಯರು, ಸರ್ಕರದ ಬೆದರಿಕೆ ಹೆದರುವುದಿಲ್ಲ, ರಾಜೀನಾಮೆ ಅಂಗೀಕರಿಸಿದರೆ ಕೋ-ಆಪರೇಟಿವ್ ಆಸ್ಪತ್ರೆಗಳ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸುವುದಾಗಿ ಸವಾಲು ಹಾಕಿದ್ದಾರೆ.