Untitled Document
Sign Up | Login    
Dynamic website and Portals
  
August 22, 2014

ಚೀನಾ ಅತಿಕ್ರಮಣಕ್ಕೆ ಪ್ರತಿತಂತ್ರ: ಗಡಿ ಭಾಗದಲ್ಲಿ ಆಕಾಶ್ ಕ್ಷಿಪಣಿ ನಿಯೋಜನೆ

ಭಾರತ-ಚೀನಾ ಗಡಿ ಭದ್ರತೆಗೆ ಮೋದಿ ಸರಕಾರದ ವಿಶೇಷ ಕ್ರಮ

ಆಕಾಶ್ ಕ್ಷಿಪಣಿ(ಸಂಗ್ರಹ ಚಿತ್ರ) ಆಕಾಶ್ ಕ್ಷಿಪಣಿ(ಸಂಗ್ರಹ ಚಿತ್ರ)

ನವದೆಹಲಿ : 'ಭಾರತ-ಚೀನಾ ಗಡಿ' ಭಾಗದಲ್ಲಿ ಭೂಮಿಯಿಂದ ಆಕಾಶಕ್ಕೆ ಜಿಗಿಯುವ( surface-to-air) ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಲುವ ಮೂಲಕ ಚೀನಾ ಅತಿಕ್ರಮಣವನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

ಭಾರತದ ಈಶಾನ್ಯ ಭಾಗಗಳಲ್ಲಿ ಆಕಾಶ್ ಕ್ಷಿಪಣಿಗಳೊಂದಿಗೆ ವಾಯುದಳದ ಹೊಸ ಸ್ಕ್ವಾಡ್ರನ್ ಗಳನ್ನು ನಿಯೋಜಿಸುವ ಮೂಲಕ ಚೀನಾ ಹೆಲಿಕಾಫ್ಟರ್, ಜೆಟ್ ಗಳು ಭಾರತದ ಗಡಿಯೊಳಗೆ ಪ್ರವೇಶಿಸದಂತೆ ತಡೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚೀನಾ ಈಶಾನ್ಯ ಭಾಗಗಳಲ್ಲಿ ಪದೇ ಪದೇ ಗಡಿ ಅತಿಕ್ರಮಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಆಕಾಶ್ ಕ್ಷಿಪಣಿಯೊಂದಿಗೆ 6 ಸೇನಾ ತುಕಡಿಗಳನ್ನು ನಿಯೋಜಿಸಿದೆ.

ಚೀನಾ ಅತಿಕ್ರಮಣ ತಡೆಗಟ್ಟುವ ಹಿನ್ನೆಲೆಯಲ್ಲಿ ತೇಜ್ ಪುರ್, ಚಬುವಾ ಎಂಬ ಪ್ರದೇಶಗಳಲ್ಲಿ ಇತ್ತೀಚೆಗಷ್ಟೆ ಭಾರತ ಸರ್ಕಾರ ಸುಖೋಯ್ -30 MKI ಫೈಟರ್ ಗಳನ್ನು ನಿಯೋಜಿಸಿತ್ತು. ಆದರೆ ಅತಿಕ್ರಮಣ ಮುಂದುವರೆಯುತ್ತಿರುವುದರಿಂದ ಸುಖೋಯ್ -30 MKI ಗಿಂತಲೂ ಹೆಚ್ಚಿನ ಸಾಮರ್ಥ್ಯವುಳ್ಳ ಭೂಮಿಯಿಂದ ಆಕಾಶಕ್ಕೆ ಜಿಗಿಯುವ ಅಕಾಶ್ ಕ್ಷಿಪಣಿಗಳನ್ನು ನಿಯೋಜಿಸಲು ಸಿದ್ಧತೆ ನಡೆಸಿದೆ.

ಆಕಾಶ್ ಕ್ಷಿಪಣಿ ತುಕಡಿಗಳು ಶೀಘ್ರವೇ ಈಶಾನ್ಯಭಾಗದಲ್ಲಿರುವ ಸೇನಾಪಡೆಗೆ ತಲುಪಲಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಆಕಾಶ್ ಕ್ಷಿಪಣಿಗಳು 25 ಕಿ.ಮಿ. ಪ್ರತಿಬಂಧ ವ್ಯಾಪ್ತಿಯಲ್ಲಿ ಎಲ್ಲಾ ಹವಾಮಾನದಲ್ಲೂ ಶತೃಗಳ ದಾಳಿಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿಯನ್ನು ಡಿ.ಆರ್.ಡಿ.ಒ ಸಂಸ್ಥೆ ಅಭಿವೃದ್ಧಿಪಡಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited