Untitled Document
Sign Up | Login    
ಉಕ್ಕು ಕಾರ್ಖಾನೆ ಸ್ಥಾಪನೆಯಿಂದ ಹಿಂದೆ ಸರಿದ ಪೋಸ್ಕೋ: ಭೂಮಿ ಉಳಿಸಿಕೊಂಡ ಹಳ್ಳಿಗುಡಿ ರೈತರು

ಸಾಂದರ್ಭಿಕ ಚಿತ್ರ

ಗದಗ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ 32,೦೦೦ ಕೋಟಿ ರೂ ವೆಚ್ಚದ ಬೃಹತ್ ಉಕ್ಕು ಕಾರ್ಖಾನೆಯನ್ನು ಕೈಬಿಡಲು ಪೋಸ್ಕೋ ಕಂಪನಿ ನಿರ್ಧರಿಸಿದೆ.

ಗದಗ ಜಿಲ್ಲೆಯ ಹಳ್ಳಿಗುಡಿಯಲ್ಲಿ 3,400 ಎಕರೆ ಪ್ರದೇಶದಲ್ಲಿ ವಾರ್ಷಿಕ 60 ಲಕ್ಷ ಟನ್ ಸಾಮರ್ಥ್ಯದ ಉಕ್ಕು ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಈ ಸಂಬಂಧ 2010ರಲ್ಲಿ ಕೊರಿಯಾ ಮೂಲದ ಪೋಸ್ಕೋ ಕಂಪನಿ ಹಾಗೂ ಹಿಂದಿನ ಬಿಜೆಪಿ ಸರ್ಕಾರ ಒಡಂಬಡಿಕೆಗೆ ಸಹಿ ಹಾಕಿದ್ದವು. ಈ ಹಿನ್ನಲೆಯಲ್ಲಿ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಸುತ್ತಮುತ್ತ ಭೂಸ್ವಾದೀನ ನಡೆಯಬೇಕಿತ್ತು.

ಆದರೆ ಯೋಜನೆ ಜಾರಿಗೆ ಅಗತ್ಯವಾದ ಭೂಮಿ ಒದಗಿಸಲು ರಾಜ್ಯ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ಈ ಯೋಜನೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳಲಾಗಿದೆ.
ಹಳ್ಳಿಗುಡಿ ಗ್ರಾಮಸ್ಥರು ಉಕ್ಕು ಕಾರ್ಖಾನೆ ಸ್ಥಾಪನೆ ಯೋಜನೆಯಿಂದ ತಮ್ಮ ಭೂಮಿಯನ್ನು ಬಿಟ್ಟು ಕೊಡಬೇಕಾಗುತ್ತದೆ. ಹೀಗಾಗಿ ಭೂಮಿ ನೀಡುವುದಿಲ್ಲ ಎಂದು ಪ್ರತಿಭಟನೆಗಳನ್ನು ನಡೆಸಿದ್ದರು. ಕೆಲ ಜನರು ಜಮೀನು ನೀಡಲು ಮುಂದಾದರೂ ಹೆಚ್ಚಿನ ಜನ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಭವಾಗಿತ್ತು.

ಈ ಎಲ್ಲಾ ಹಿನ್ನಲೆಯಲ್ಲಿ ಪೋಸ್ಕೋ ಕಂಪನಿ 3 ವರ್ಷ ಕಾದುನೋಡಿ, ತಾನು ಇಟ್ಟ 60 ಕೋಟಿ ರೂ ಠೇವಣಿ ಹಣ ವಾಪಸ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದು, ಯೋಜನೆಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದೆ.

ಅಲ್ಲದೇ ಪ್ರಸ್ತುತ ಯೋಜನೆ ಬಿಟ್ಟು ಬೇರೆ ಉದ್ಯಮ ಪ್ರಸ್ತಾಪ ಬಂದರೆ ಆ ಬಗ್ಗೆ ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧ ಎಂದು ಪೋಸ್ಕೋ ಅಧಿಕಾರಿಗಳು ತಿಳಿಸಿದ್ದಾರೆ. ಅದೇನೇ ಇರಲಿ, ಈ ಯೋಜನೆಯಿಂದ ಪೋಸ್ಕೋ ಹಿಂದೆ ಸರಿದಿದ್ದರಿಂದ ಸಧ್ಯ ಗದಗ ಜಿಲ್ಲೆಯ ಹಳ್ಳಿಗುಡಿ ಗ್ರಾಮಸ್ಥರು 3,400 ಎಕರೆಯ ತಮ್ಮ ಭೂಮಿಯನ್ನು ಉಳಿಸಿಕೊಂಡಿರುವುದಂತು ಸುಳ್ಳಲ್ಲ.

 

Author : ಯಶೋಧಾ ಆರ್.ಬಿ

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited