ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗಲಭೆ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಮೂರನೇ ಬಾರಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಜಮ್ಮು ಹಾಗೂ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಖಾಝಿಗುಂಡ್ ಬಳಿ ಪ್ರತಿಭಟನಕಾರರು ಇಬ್ಬರನ್ನು ಹತ್ಯೆ ಮಾಡಿದ ಪರಿಣಾಮ ಯಾತ್ರೆಯನ್ನು ಪುನಃ ಮೊಟಕುಗೊಳಿಸಲಾಯಿತು.
ಹಿಜ್ಬುಲ್ ಮುಜಾಹಿದಿನ್ ಉಗ್ರ ಸಂಘಟನೆ ಮುಖಂಡ ಬುರ್ಹಾನ್ ವನಿ ಹತ್ಯೆಯಿಂದ ಉಂಟಾದ ಗಲಭೆ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಬಾರಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
ಜುಲೈ ಒಂಬತ್ತರಂದು ಮೊದಲ ಬಾರಿ ಯಾತ್ರೆಯನ್ನು ಅಮಾನತುಗೊಳಿಸಿ, ಜುಲೈ ಹನ್ನೊಂದರಂದು ಪುನಾರಂಭಿಸಲಾಗಿತ್ತು. ಪರಿಸ್ಥಿತಿ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಜುಲೈ 14ರಂದು ಎರಡನೇ ಬಾರಿ ಯಾತ್ರೆ ಸ್ಥಗಿತಗೊಳಿಸಿ ಜುಲೈ 10ರಂದು ಆರಂಭಮಾಡಲಾಗಿತ್ತು.
ಜುಲೈ 2ರಂದು ಆರಂಭಗೊಂಡಿರುವ 48 ದಿನಗಳ ಯಾತ್ರೆಯಲ್ಲಿ ಈವರೆಗೆ 1,72,851 ಯಾತ್ರಿಕರು ಹಿಮಲಿಂಗ ದರ್ಶನ ಪಡೆದಿದ್ದಾರೆ. ಅಮರನಾಥ ಯಾತ್ರೆ ಅಗಸ್ಟ್ 17ರಂದು ಕೊನೆಗೊಳ್ಳಲಿದೆ.