Sullia : ನಮ್ಮ ವ್ಯಕ್ತಿತ್ವ ವಿಕಸನ ಹಾಗೂ ದೇಹದ ಆರೋಗ್ಯಕ್ಕಾಗಿ ಯೋಗವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕರ್ತವ್ಯ ನಿರ್ವಹಣೆಯ ಸರಿಯಾದ ಮಾರ್ಗವೇ ಧರ್ಮ. ಧರ್ಮ ಮಾರ್ಗದಲ್ಲಿ ನಡೆಯಲು ಆರೋಗ್ಯವು ಸುಸ್ಥಿತಿಯಲ್ಲಿರಬೇಕು. ಶರೀರದ ಅಂಗಗಳಿಗೆ ಸರಿಯಾಗಿ ವ್ಯಾಯಾಮ ಮತ್ತು ಮನಸ್ಸಿಗೆ ಏಕಾಗ್ರತೆಯ ಅಭ್ಯಾಸ ದೊರೆತಾಗ ಯೋಗದಿಂದ ಆರೋಗ್ಯ ಸಿಗುತ್ತದೆ ಎಂಬುದಾಗಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ವಿಶ್ವ ಯೋಗದಿನದ ಮಹತ್ವದ ಕುರಿತು ಹೇಳಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಎಲ್ಲರನ್ನೂ ಸ್ವಾಗತಿಸಿ ಯೋಗ ಶಿಕ್ಷಣವನ್ನು ನಮ್ಮ ಶಾಲೆಯಲ್ಲಿ ನಿಯಮಿತವಾಗಿ ಕಲಿಸುತ್ತಿದ್ದೇವೆ. ಹಾಗಾಗಿ ವಿಶ್ವ ಯೋಗದಿನವು ನಮಗೆ ವಿಶೇಷವಾದ ದಿನ ಎಂದರು.
ಬಳಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ವಿವಿಧ ಯೋಗಾಸಾನಗಳನ್ನು ಮಾಡುವುದರ ಮೂಲಕ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಿಕ್ಷಕಿ ಶ್ರೀಮತಿ ಸವಿತಾ ಯಂ. ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಶಿಕ್ಷಕ ದೇವಿಪ್ರಸಾದ್ ಜಿ.ಸಿ. ವಂದಿಸಿದರು.