ನವದೆಹಲಿ : ಕಪ್ಪು ಹಣದ ತನಿಖೆಗಾಗಿ ಶೀಘ್ರದಲ್ಲೇ ಭಾರತೀಯ ಅಧಿಕಾರಿಗಳ ತಂಡ ಸ್ವಿಜರ್ಲೆಂಡ್ಗೆ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಸ್ವಿಜರ್ಲೆಂಡ್ ಪ್ರವಾಸ ಕೈಗೊಂಡು ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಸ್ವಿಜರ್ಲೆಂಡ್ ನಾಯಕರೊಂದಿಗೆ ಮಾತುಕತೆ ನಡೆಸಿದ ಬೆನ್ನಲ್ಲೇ ಭಾರತೀಯ ಅಧಿಕಾರಿಗಳ ತಂಡ ಸ್ವಿಜರ್ಲೆಂಡ್ಗೆ ಭೇಟಿ ನೀಡಲಿದೆ.
ಸ್ವಿಜರ್ಲೆಂಡ್ನ ಉನ್ನತ ಅಧಿಕಾರಿಗಳ ತಂಡ ಭಾರತಕ್ಕೆ ಭೇಟಿ ನೀಡಿದ್ದು, ಹಣಕಾಸು ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ತೆರಿಗೆ, ಹಣಕಾಸಿನ ವ್ಯವಹಾರಗಳು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಅಧಿಕಾರಿಗಳು ಮಾತುಕತೆ ನಡೆಸಿದರು.
ಹಣಕಾಸು ಕಾರ್ಯದರ್ಶಿ ಹಿಮಾಂಶು ಅಧಿಯಾ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರೊಂದಿಗೆ ಸ್ವಿಸ್ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಭಾರತ ಮತ್ತು ಸ್ವಿಜರ್ಲೆಂಡ್ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಒಪ್ಪಂದ ಜಾರಿಗೆ ತರುವ ಸಂಬಂಧ ಉಭಯ ರಾಷ್ಟ್ರಗಳು ಅಗತ್ಯ ಪ್ರಕ್ರಿಯೆಗೆ ಚಾಲನೆ ನೀಡಿವೆ.
ಈ ಒಪ್ಪಂದಕ್ಕೆ ಸಹಿ ಹಾಕಿದರೆ, 2018ರಿಂದ ಭಾರತೀಯ ನಾಗರಿಕರು ಸಿಜರ್ಲೆಂಡ್ನಲ್ಲಿ ನಡೆಸುವ ಹಣಕಾಸಿನ ವಹಿವಾಟುಗಳುಗಳ ಮಾಹಿತಿ ಕೇಂದ್ರ ಸರ್ಕಾರಕ್ಕೆ ಲಭ್ಯವಾಗಲಿದೆ.