ಕೋಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆ ಚುನಾವಣೆಯ 5 ನೇ ಹಂತದ ಮತದಾನ ಬೆಳಗ್ಗೆ 7 ಗಂಟೆಯಿಂದ ಶಾಂತಿಯುತವಾಗಿ ಆರಂಭಗೊಂಡಿದೆ. ಭುವನೇಶ್ವರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ 53 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿರುವ ಈ ಮತದಾನ ಪ್ರಕ್ರಿಯೆ ಎಲ್ಲರ ಕುತೂಹಲ ಮೂಡಿಸಿದೆ.
ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು ಮತದಾರ ಯಾರತ್ತ ಒಲವು ತೋರುತ್ತಾನೆ ಎಂಬು ದುಗಮನ ಸೆಳೆದಿದೆ.
ಭವಾನಿಪುರದಲ್ಲಿ ಬಿಜೆಪಿಯಿಂದ ನೇತಾಜಿ ಮರಿಮೊಮ್ಮಗ ಚಂದ್ರಕುಮಾರ್ ಬೋಸ್, ತೃಣಮೂಲ ಕಾಂಗ್ರೆಸ್ ನಾಯಕಿ, ಮಾಜಿ ಕೇಂದ್ರ ಸಚಿವೆ ದೀಪಾ ದೇಶ್ವುುನ್ಷಿ ಕಣದಲ್ಲಿ ವಿಜಯದ ಮಾಲೆ ಯಾರಿಗೆ ದೊರೆಯಲಿದೆ ಎಂಬ ಲೆಕ್ಕಾಚಾರ ತೀವ್ರ ಚರ್ಚೆಗೆ ಒಳಗಾಗಿದೆ.
ಆಯಕಟ್ಟಿನ ಮತ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಶಾಂತಿಯುತ ಮತದಾನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾ ವಿಭಾಗ ತಿಳಿಸಿದೆ.