ನವದೆಹಲಿ : ಜಾಗತಿಕ ಆರ್ಥಿಕತೆಯ ಚೇತರಿಕೆಗೆ ಏಷ್ಯಾ ಭರವಸೆಯ ಆಶಾಕಿರಣವಾಗಿದೆ, 21 ನೇ ಶತಮಾನ ಏಷ್ಯಾದ ಶತಮಾನವೆಂದು ತಜ್ಞರು ಹೇಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಭಾರತ ಹೋಡಿಕೆಗೆ ನೆಚ್ಚಿನ ತಾಣವಾಗಿ ಉನ್ನತ ಶ್ರೇಯಾಂಕಗಳಲ್ಲಿದೆ. ಈ ನಿಟ್ಟಿನಲ್ಲಿ ಸುಧಾರಣೆಗಳು ಮುಂದುವರೆಯಿತ್ತವೆ ಎಂದು ಹೇಳಿದರು.
'ಏಷ್ಯಾ ಕಾನ್ಫರೆನ್ಸ್&id=19183'>ಅಡ್ವಾನ್ಸಿಂಗ್ ಏಷ್ಯಾ ಕಾನ್ಫರೆನ್ಸ್'ನಲ್ಲಿ ಐಎಂಎಫ್ ಆಡಳಿತ ನಿರ್ದೇಶಕಿ ಕ್ರಿಸ್ಟೀನಾ ಲಗಾರ್ಡ್ ಅವರ ಜತೆಗೆ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಏಷ್ಯಾ ಖಂಡದಲ್ಲಿ ಭಾರತಕ್ಕೆ ವಿಶೇಷವಾದ ಸ್ಥಾನವಿದೆ. ಅದು ಅನೇಕ ರೀತಿಯಿಲ್ಲಿ ಏಷ್ಯಾದ ಅಭಿವೃದ್ದಿಗೆ ಕಾಣಿಕೆ ನೀಡಿದೆ ಎಂದು ಹೇಳಿದರು.
ಸರ್ಕಾರ ತೆಗೆದುಕೊಂಡ ಹೆಜ್ಜೆಗಳಿಂದ ವಾಣಿಜ್ಯೋದ್ಯಮ ಕೂಡಾ ಅಭಿವೃದ್ಧಿಯಾಗುತ್ತಿದೆ. ನಾವು ಗ್ರಾಮೀಣ ಭಾರತದಲ್ಲಿ ಮತ್ತು ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿದ್ದೇವೆ. ಏಕೆಂದರೆ ದೇಶದ ಬಹು ಸಂಖ್ಯೆಯ ಜನರೇ ವಾಸಿಸಿಕೊಂಡಿರುವುದು ಭಾರತದ ಹಳ್ಳಿಗಳಲ್ಲಿ ಎಂದು ಮೋದಿ ಹೇಳಿದರು.
ಪ್ರಜಾಪ್ರಭುತ್ವ ಮತ್ತು ಆರ್ಥಿಕಾಭಿವೃದ್ಧಿ ಜೊತೆಜೊತೆಗೆ ಸಾಗುವುದಿಲ್ಲ ಎಂಬ ಗ್ರಹಿಕೆಯನ್ನು ಭಾರತವು ಸುಳ್ಳು ಮಾಡಿದೆ. ಭಾರತವು ಒಂದು ಅತ್ಯಂತ ವೈವಿಧ್ಯಮಯ ಸುವಿಶಾಲ ದೇಶವಾಗಿದ್ದು ಆರ್ಥಿಕಾಭಿವೃದ್ಧಿ ಮತ್ತು ಸಾಮಾಜಿಕ ದೃಢತೆಯನ್ನು ಅದು ಒಟ್ಟಿಗೇ ನಿಭಾಯಿಸಲು ಸಾಧ್ಯ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ' ಎಂದು ಮೋದಿ ಹೇಳಿದರು.