ನವದೆಹಲಿ : ಎಲ್ ಪಿ ಜಿ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವುದರಲ್ಲಿ ಯಶಸ್ವಿಯಾಗಿರುವ ಸರ್ಕಾರ, ಏಪ್ರಿಲ್ 1 ರಿಂದ ಸೀಮೇ ಎಣ್ಣೆಗೆ ಸಹ ಇದೇ ತರಹದ ಯೋಜನೆ ಜಾರಿಗೊಳಿಸಲಿದೆ. ಗ್ರಾಹಕರು ಮಾರುಕಟ್ಟೆ ಬೆಲೆ ಸೀಮೆ ಎಣ್ಣೆ ಖರೀದಿಸಿಬೇಕಾಗುತ್ತದೆ. ಇದಕ್ಕೆ ಸಿಗುವ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಹಲವು ರಾಜ್ಯಗಳಿಂದ ನೇರ ಲಾಭ ವರ್ಗಾವಣೆ ಜಾರಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ.
ಗ್ರಾಮ ವಿದ್ಯುದೀಕರಣ ಕಾರ್ಯಕ್ರಮದ ಅನುಷ್ಠಾನದಿಂದ ಬೆಳಕು ಮತ್ತು ಅಡಿಗೆಗಾಗಿ ಉಪಯೋಗಿಸುವ ಸೀಮೆ ಎಣ್ಣೆಯ ಬೇಡಿಕೆ ಬಹಲ ಕಡಿಮೆಯಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರ ಅಭಿಪ್ರಾಯ ಕೇಳಿ ಅನುಷ್ಠಾನಗೊಳಿಸಲಾಗುವುದೆಮ್ದು ಕೆಂದ್ರ ಸರ್ಕಾರ ಹೇಳಿದೆ.
ಈ ಯೋಜನೆಯನ್ನು ಜಾರಿಗೊಳಿಸುವುದರಿಂದ ಸೀಮೆ ಎಣ್ಣೆ ವಿತರಣೆಯಲ್ಲಿ ನಡೆಯುತ್ತಿರುವ ಅವ್ಯವಾಹಾರವನ್ನು ತಡೆಗಟ್ಟಬಗಹುದು.