ನವದೆಹಲಿ : ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಮತ್ತು ಮೀರತ್ ನಡುವಿನ 14 ಪಥಗಳ ಎಕ್ಸ್ ಪ್ರೆಸ್ ಹೈವೇಗೆ ಶಂಕುಸ್ಥಾಪನೆ ನೆರವೇರಿಸಿದರು. ಇದನ್ನು ಮಾಲಿನ್ಯ ಮುಕ್ತ ಹಾದಿ ಎಂದು ಬಣ್ಣಿಸಿದರು.
ದೆಹಲಿ-ಮೀರತ್ತ್ ಹೈವೆ ಜನನಿಬಿಡ ಹೆದ್ದಾರಿಯಾಗಿದ್ದು, ಹೊಸ ಎಕ್ಸ್ ಪ್ರೆಸ್ ಹೈವೆಯಿಂದ ಸಿಗ್ನಲ್ ಮುಕ್ತವಾಗಲಿದೆ ಹಾಗೂ ಪ್ರಯಾಣದ ಸಮಯವನ್ನು ಎರಡುವರೆ ಗಂಟೆಯಿಂದ ನಲವತ್ತು ನಿಮಿಷಕ್ಕೆ ಕಡಿಮೆ ಆಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಮಾಲಿನ್ಯ ಮುಕ್ತ ದೇಶ ಮಾಡುವತ್ತ ಹೊಸ ಹೆಜ್ಜೆ ಇದಾಗಿದೆ.ಈ ಎಕ್ಸ್ ಪ್ರೆಸ್ ಹೈವೇ ನಿರ್ಮಾಣದಿಂದ ಪ್ರವಾಸೋದ್ಯಮ ಹಾಗೂ ಸಾವಿರಾರು ಉದ್ಯೋಗಕ್ಕೆ ಅವಕಾಶವಾಗಲಿದೆ. ದೆಹಲಿಯ ಉಪನಗರಗಳನ್ನು ಈ ಹೈವೇ ಸಂಪರ್ಕಿಸಲಿದೆ. ಹಳ್ಳಿ, ಹಳ್ಳಿಗಳ ನಡುವೆ ಉತ್ತಮ ಸಂಪರ್ಕ ರಸ್ತೆ ನಿರ್ಮಾಣವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.