ಇಸ್ಲಾಮಾಬಾದ್ : ಭಾರತ-ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆಗೆ ಅಡ್ಡಿ ಬರದಂತೆ ಎಚ್ಚರಿಕೆ ವಹಿಸಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಭಾರತದ ವಿರುದ್ಧ ಹೇಳಿಕೆ ನೀಡಬೇಡಿ ಎಂದು ತಮ್ಮ ಸಚಿವರಿಗೆ ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಶಾಂತಿ ಮಾತುಕತೆಗೆ ಭಂಗ ತರುವಂತಹ ಯಾವುದೇ ಹೇಳಿಕೆಯನ್ನೂ ನೀಡಬೇಡಿ ಎಂದಿದ್ದಾರೆಂದು ಪ್ರಧಾನಿ ಷರೀಫ್ ಅವರ ನಿಕಟವರ್ತಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಮಾತುಕತೆಗೆ ಪೂರಕವಾಗುವ ಹೇಳಿಕೆಗಳನ್ನು ಮಾತ್ರ ನೀಡಬೇಕು, ಮಾತುಕತೆಗೆ ಹಾನಿ ಉಂಟು ಮಾದುವ ಹೇಳಿಕೆ ನೀಡಬಾರದೆಮ್ದು ಹೇಳಿದ್ದಾರೆ ಎಂದು ದಿ ನೇಷ್ಯನ್ ಹಿರಿಯ ಅಧಿಕಾರಿ ಹೇಳಿರುವುದನ್ನು ಉಲ್ಲೇಖಿಸಿ ವರದಿ ಮಾಡಿದೆ.