ನವದೆಹಲಿ : ಡಿಡಿಸಿಎ ವಿವಾದದ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಜ್ರಿವಾಲ್ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಗುರುವಾರ ಆರೋಪ ಮಾಡಿ, ಅವರು ಅಸತ್ಯವನ್ನು ನಂಬಿ, ಉನ್ಮಾದದ ಅಂಚಿನಲ್ಲಿರುವ ಮಾತನಾಡುತ್ತಾರೆ ಎಂದರು.
ಕೇಜ್ರಿವಾಲ್ ಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಪಶ್ಚಿಮ ಬೆಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ವಾಗ್ದಾಳಿ ನಡೆಸಿದ ಜೇಟ್ಲಿ, ಅವರು ದೆಹಲಿ ಮುಖ್ಯಮಂತ್ರಿಯಿಂದ ದೂರ ಇರುವುದು ಒಳಿತು ಎಂದರು.
2014-15 ರ ಕೆಲವು ಸಂಗತಿಗಳು ಉಲ್ಲೇಖಿಸಿ ಮಾತನಾಡಿದ ಜೇಟ್ಲಿ, ಕೇಜ್ರಿವಾಲ್ ದೆಹಲಿ ಕ್ರಿಕೆಟ್ ವಿವಾದದಲ್ಲಿ ನನ್ನನ್ನು ಎಳೆಯಲು ಸಾಧ್ಯವಿಲ್ಲ ಏಕೆಂದರೆ, ನಾನು 2013ರಲ್ಲೇ ದೆಹಲಿ ಕ್ರಿಕೆಟ್ ಮಂಡಳಿ ಇಂದ ಹೊರಬಂದಿದ್ದೇನೆ ಎಂದು ತಿಳಿಸಿದರು.
ಸಿಬಿಐ ದಾಳಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಕೇಜ್ರಿವಾಲ್ ಬಳಸಿದ ಭಾಷೆಯ ಬಗ್ಗೆ ವಾಗ್ದಾಳಿ ನಡೆಸಿ, ಇದು ಸ್ವೀಕೃತ ಮಾತಲ್ಲ, ಇದು ಸಂಯುಕ್ತ ವ್ಯವಸ್ಥೆಗೆ ಬೆದರಿಕೆ ಎಂದರು.