ಅಹಮದಾಬಾದ್ : ಅಸಹಿಷ್ಣುತೆಯ ಕುರಿತು ದೇಶದಲ್ಲಿ ಚರ್ಚೆಯಾಗುತ್ತಿರುವ ಮಧ್ಯೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಂಗಳವಾರ ಭೇದ ಆಲೋಚನೆಗಳಿಂದ ಭಾರತದ ಶುದ್ಧೀಕರಣ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ನಿಜವಾದ ಕಲ್ಮಶ ಇರುವುದು ದಾರಿಗಳಲ್ಲಿ ಅಲ್ಲ ನಮ್ಮ ಮನಸ್ಸಿನಲ್ಲಿ ಎಂದು ಹೇಳಿದ್ದಾರೆ.
ಅಹಮದಾಬದ್ ನ ಮಹಾತ್ಮಾ ಗಾಂಧಿ ಅವರ ಸಾಬರಮತಿ ಆಶ್ರಮದಲ್ಲಿನ ಸಮಾರಂಭದಲ್ಲಿ ಮಂಗಳವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಯನ್ನು ಹೊಗಳಿದ ರಾಷ್ಟ್ರಪರಿ ಅವರು, ಇದನ್ನು ನಮ್ಮ ಮನಸನ್ನು ಶುದ್ಧೀಕರಣಗೊಳಿಸುವ ಪ್ರಯತ್ನದ ಪ್ರಾರಂಭ ಎಂದು ತಿಳಿಯಬೇಉ ಮತ್ತು ಎಲ್ಲಾ ಅಂಶಗಳಿಂದಲೂ ಗಾಂಧೀಜಿ ಅವರಿಗಿದ್ದ ದೃಷ್ಟಿಕೋನಯನ್ನು ಪೂರೈಸಬೇಕು ಎಂದು ತಿಳಿಸಿದರು.
ಪ್ರತಿದಿನವೂ ಪ್ರಪಂಚದಲ್ಲಿ ಹಿಂಸಾಚಾರ ನಡೆಯುತ್ತಿರುವುದನ್ನು ನೋಡುತ್ತಿರುತ್ತೇವೆ. ಈ ರೀತಿಯ ಹಿಂಸಾಚಾರ ಕತ್ತಲೆಯ ಮನೋಭಾವದಿಂದ ಕೂಡಿದೆ. ಹಿಂಸಾಚಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಅಹಿಂಸೆಯ ಶಕ್ತಿಯನ್ನು ನಾವು ಮರೆಯಬಾರದು ಎಂದು ಪ್ರಣಬ್ ವಿಶ್ಲೇಷಿಸಿದರು.