Untitled Document
Sign Up | Login    
Dynamic website and Portals
  
December 1, 2015

ನಿಜವಾದ ಕಲ್ಮಶ ಇರುವುದು ದಾರಿಗಳಲ್ಲಿ ಅಲ್ಲ ನಮ್ಮ ಮನಸ್ಸಿನಲ್ಲಿಃ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಸಾಬರಮತಿ ಆಶ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಾಬರಮತಿ ಆಶ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಅಹಮದಾಬಾದ್ : ಅಸಹಿಷ್ಣುತೆಯ ಕುರಿತು ದೇಶದಲ್ಲಿ ಚರ್ಚೆಯಾಗುತ್ತಿರುವ ಮಧ್ಯೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಂಗಳವಾರ ಭೇದ ಆಲೋಚನೆಗಳಿಂದ ಭಾರತದ ಶುದ್ಧೀಕರಣ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ನಿಜವಾದ ಕಲ್ಮಶ ಇರುವುದು ದಾರಿಗಳಲ್ಲಿ ಅಲ್ಲ ನಮ್ಮ ಮನಸ್ಸಿನಲ್ಲಿ ಎಂದು ಹೇಳಿದ್ದಾರೆ.

ಅಹಮದಾಬದ್ ನ ಮಹಾತ್ಮಾ ಗಾಂಧಿ ಅವರ ಸಾಬರಮತಿ ಆಶ್ರಮದಲ್ಲಿನ ಸಮಾರಂಭದಲ್ಲಿ ಮಂಗಳವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಯನ್ನು ಹೊಗಳಿದ ರಾಷ್ಟ್ರಪರಿ ಅವರು, ಇದನ್ನು ನಮ್ಮ ಮನಸನ್ನು ಶುದ್ಧೀಕರಣಗೊಳಿಸುವ ಪ್ರಯತ್ನದ ಪ್ರಾರಂಭ ಎಂದು ತಿಳಿಯಬೇಉ ಮತ್ತು ಎಲ್ಲಾ ಅಂಶಗಳಿಂದಲೂ ಗಾಂಧೀಜಿ ಅವರಿಗಿದ್ದ ದೃಷ್ಟಿಕೋನಯನ್ನು ಪೂರೈಸಬೇಕು ಎಂದು ತಿಳಿಸಿದರು.

ಪ್ರತಿದಿನವೂ ಪ್ರಪಂಚದಲ್ಲಿ ಹಿಂಸಾಚಾರ ನಡೆಯುತ್ತಿರುವುದನ್ನು ನೋಡುತ್ತಿರುತ್ತೇವೆ. ಈ ರೀತಿಯ ಹಿಂಸಾಚಾರ ಕತ್ತಲೆಯ ಮನೋಭಾವದಿಂದ ಕೂಡಿದೆ. ಹಿಂಸಾಚಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಅಹಿಂಸೆಯ ಶಕ್ತಿಯನ್ನು ನಾವು ಮರೆಯಬಾರದು ಎಂದು ಪ್ರಣಬ್ ವಿಶ್ಲೇಷಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited