ವಾರಣಾಸಿ : ಶುಕ್ರವಾರ ಒಂದು ದಿನದ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯ ಭೇಟಿಯ ಸಂದರ್ಭದಲ್ಲಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, 501 ಪೆಡಲ್ ರಿಕ್ಷಾಗಳನ್ನು ಮತ್ತು 101 ಇ-ರಿಕ್ಷಾಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಪ್ರಮುಖ ಅಂಶಗಳು ಈ ಕೆಳಗಿನಂತಿವೆಃ
* ಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಸರ್ಕಾರದ ಮೊದಲ ಗುರಿ
* ವರ್ಷಗಳ ವರೆಗೆ ನಾವು ಗರೀಬಿ ಹಟಾವೋ ಎಂಬ ಘೋಷವಾಕ್ಯ ಮಾತ್ರ ಕೇಳಿದ್ದೇವೆ.
* ಹಗಲು ರಾತ್ರಿ ಬಡವರ ಕಲ್ಯಾಣದ ಬಗ್ಗೆ ಮಾತನಾಡುವುದು ಸಂಪ್ರದಾಯವಾಗಿದೆ.
* ಆದರೆ ಬಡವರ ಜೀವನದಲ್ಲಿ ಅತ್ಯಲ್ಪ ಬದಲಾವಣೆ ಕಂಡುಬಂದಿದೆ.
* ತಂತ್ರಜ್ನಾನಗಳಿಂದ ಬಡವರು ಹೆಚ್ಚು ಸಂಪಾದನೆ ಮಾಡಬಹುದು.
* ಆಟೋ ಚಾಲಕರು ನಗರಕ್ಕೆ ಮಾರ್ಗದರ್ಶಿಗಳಾಗಿದ್ದಾರೆ. ಅವರು ಪ್ರವಾಸಿಗರ ಮೇಲೆ ಪ್ರಭಾವ ಬೀರುತ್ತಾರೆ.
* ಇ-ರಿಕ್ಷಾಗಳು ವಾರಣಾಸಿಯ ಭವಿಷ್ಯವನ್ನು ಬದಲಾವಣೆ ಮಾಡುತ್ತವೆ.
* ನಾನು ಆಟೋ ಚಾಲಕರಲ್ಲಿ ಮನವಿ ಮಾಡುತ್ತೇನೆ, ಬಡತನದಿಂದಾಗಿ ನಿಮ್ಮ ಮಕ್ಕಳ ವಿದ್ಯಾಬ್ಯಾಸದಲ್ಲಿ ರಾಜಿ ಮಾಡಿಕೊೞಬೇಡಿ.
* ನಾವು ನಮ್ಮ ಮಕ್ಕಳನ್ನು ವಿದ್ಯಾವಂತರನ್ನಗಿಸಿದರೆ, ಪ್ರಪಂಚದ ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ.
* ಅವರು (ಹಿಂದಿನ ಸರ್ಕಾರ) 50 ವರ್ಷಗಳಲ್ಲಿ ಮಾಡದೇ ಇರುವುದನ್ನು 50 ತಿಂಗಳಲ್ಲಿ ಮಾಡುತ್ತೇನೆ