ನವದೆಹಲಿ : 'ಭಾರತದ ವ್ಯವಸ್ಥೆ ಮತ್ತು ನ್ಯಾಯಾಂಗಕ್ಕೆ ಗೌರವ ಕೊಡಲಾರದವರು ಪಾಕಿಸ್ತಾನಕ್ಕೆ ಹೋಗಬಹುದು, (ಅವರಿಗೆ) ದ್ವಾರ ಮುಕ್ತವಾಗಿದೆ'.. ಇದು ಗಲ್ಲು ಶಿಕ್ಷೆ ಎದುರಿಸುತ್ತಿರುವ ಯಾಕೂಬ್ ಮೆಮೋನ್ ಪರವಾಗಿ ಹೇಳಿಕೆ ನೀಡಿದ ಸಂಸದ ಅಸದುದ್ದಿನ್ ಓವೈಸ್ವಿ ಗೆ ಬಿಜೆಪಿಯ ಸಾಖ್ಶಿ ಮಹಾರಾಜ್ ನೀಡಿದ ಎದಿರೇಟು!
1993ರಲ್ಲಿ 275 ಅಮಾಯಕರನ್ನು ಬಲಿ ತೆಗೆದುಕೊಂಡ ಮುಂಬೈ ಸರಣಿ ಸ್ಪೋಟದಲ್ಲಿ ಅಪರಾಧಿ ಎಂದು ಸಾಬೀತಾದ ಕಾರಣಕ್ಕೆ ಯಾಕೂಬ್ ಮೆಮೊನ್ ಗೆ ಗಲ್ಲು ಶಿಕ್ಷೆ ನಿರ್ಧಾರವಾಗಿದ್ದು, ಅವನು ಸಲ್ಲಿಸಿದ್ದ ಮೇಲ್ಮನವಿಗಳು ಸಹ ಉಚ್ಚ ನ್ಯಾಯಾಲಯದಲ್ಲಿ ತಿರಸ್ಕರಿಸಲ್ಪಟ್ಟಿದೆ. ಈ ಹಿನ್ನಲೆಯಲ್ಲಿ ಅವನಿಗೆ ಜುಲೈ ೩೦ರಂದು ಗಲ್ಲು ಶಿಕ್ಷೆ ನಿಗದಿಯಾಗಿದ್ದು, ಓವೈಸ್ವ್ವಿ ಸೇರಿದಂತೆ ಕೆಲವು ರಾಜಕಾರಣಿಗಳು ಇದರ ರಾಜಕೀಯ ಲಾಭಕ್ಕಾಗಿ ಹವಣಿಸುತ್ತಿದ್ದಾರೆ.
ಯಾಕುಬ್ ಗೆ ಗಲ್ಲು ಶಿಕ್ಷೆ ನೀಡಿರುವುದರ ವಿರುದ್ಧ ಮಾತನಾಡಿದ ಹೈದರಾಬಾದ್ ನ ಸಂಸದ ಓವೈಸ್ವಿ, ಅವನು ಮುಸ್ಲಿಂ ಎಂಬ ಕಾರಣಕ್ಕಾಗಿ ಅವನಿಗೆ ಗಲ್ಲು ಶಿಕ್ಷೆ ನೀಡಲಾಗಿದೆ ಎಂಬರ್ಥ ಬರುವಂತೆ ಹೇಳಿಕೆ ಕೊಟ್ಟಿರುವುದು ಸಾಕ್ಷಿ ಮಹಾರಾಜ್ ರನ್ನು ಕೆರಳಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಓವೈಸ್ವಿ ಹಲವಾರು ಟಿಪ್ಪಣಿಗಳನ್ನು ಬೆರೆದುಕೊಂಡಿರುವುದೂ ಅಲ್ಲದೆ, ಯಾಕುಬ್ ತಾನೇ ಶರಣಾಗತನಾಗಿದ್ದ, ಅವನನ್ನು ಬಂಧಿಸಲಾಗಿಲ್ಲ ಎಂದಿದ್ದಾರೆ.
ಅಂತೂ ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಯಾವ ಮಟ್ಟಕ್ಕೆ ಇಳಿಯಬಹುದು ಎನ್ನುವುದಕ್ಕೆ ಇದು ಇನ್ನೊಂದು ಸಾಕ್ಷಿಯಾಗಿದೆ ಅಷ್ಟೆ.