ಮುಂಬೈ : ಸಲ್ಮಾನ್ ಖಾನ್ ಒಬ್ಬ ಮೆದುಳಿಲ್ಲದ ಮನುಷ್ಯ - ಹೀಗೆಂದು ಬಿರುದು ಕೊಟ್ಟವರು ಸಲ್ಮಾನ್ ನ ಹಳೆಯ ಸ್ನೇಹಿತ, ಎಂ.ಎನ್.ಎಸ್. ಪಕ್ಷದ ಮುಖಂಡ ರಾಜ್ ಠಾಕ್ರೆ.
ಮುಂಬೈ ಸರಣಿ ಸ್ಪೋಟ ಸಂಚಿನ ಅಪರಾಧಿ ಯಾಕೂಬ್ ಮೆಮೋನ್ ಪರವಾಗಿ ಅವನ ಗಲ್ಲು ಶಿಕ್ಷೆಗೆ ಮುಂಚೆ ಟ್ವಿಟ್ಟರ್ ನಲ್ಲಿ ಬ್ಯಾಟಿಂಗ್ ಮಾಡಿದ ಬಾಲಿವುಡ್ ನಟ ಸಲ್ಮಾನ್ ಖಾನ್ ನ ನಡತೆಯನ್ನು ರಾಜ್ ಠಾಕ್ರೆ ಹೀಗೆ ವಿಶ್ಲೇಷಿಸಿದ್ದಾರೆ.
'ಸಲ್ಮಾನ್ ಖಾನ್ ಒಬ್ಬ ಮೆದುಳಿಲ್ಲದ ಮನುಷ್ಯ. ಆದರೆ ಅವರ ತಂದೆ ಒಬ್ಬ ಗೌರವಾನ್ವಿತ ವ್ಯಕ್ತಿ. ಅವರು (ಸಲ್ಮಾನ್) ದಿನಪತ್ರಿಕೆ ಓದುವುದಿಲ್ಲ ಮತ್ತು ಕಾನೂನು ಬಗ್ಗೆ ತಿಳಿದಿಲ್ಲ. ಹಾಗಾಗಿ ಅವನ (ಯಾಕೂಬ್) ಪರವಾಗಿ ಟ್ವೀಟ್ ಮಾಡಿದ್ದಾರೆ. ಇನ್ನು ಕಲವರು ದೇಶದ್ರೋಹಿಗೆ ದಯೆ ನೀಡಬೇಕೆಂದು ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಯಾರೇ ಆಗಲಿ ಅದು ಹೇಗೆ ಪ್ರಶ್ನಿಸುತ್ತಾರೆ?' ಎಂದು ಠಾಕ್ರೆ ತಿವಿದಿದ್ದಾರೆ.
ಸಲ್ಮಾನ್ ತನ್ನ ಅನೇಕ ಟ್ವೀಟ್ ಗಳಲ್ಲಿ ಯಾಕೂಬ್ ಪರವಾಗಿ ಬ್ಯಾಟಿಂಗ್ ಮಾದುತ್ತ, ಟೈಗ ಮೆಮೋನ್ ನ ಬದಲಾಗಿ ಒಬ್ಬ ನಿರ್ದೋಷಿಯನ್ನು ಗಲ್ಲಿಗೇರಿಸಲಾಗುತ್ತಿದೆ ಎಂದು ಬರೆದಿದ್ದ. 'ಟೈಗರ್ ನನ್ನು ಹಿಡಿದು ಗಲ್ಲಿಗೇರಿಸಿ. ಅವನನ್ನು ಮೆರವಣಿಗೆ ಮಾಡಿಸಿ, ಆದರೆ ಅವನ ಸಹೋದರನನ್ನಲ್ಲ' ಎಂದು ಟ್ವೀಟಿಸಿದ್ದರು. ವ್ಯಾಪಕ ಖಂಡನೆಯ ಬಳಿಕ ಸಲ್ಮಾನ್ ತನ್ನ ಟ್ವೀಟ್ ಗಳನ್ನು ಅಳಿಸಿಹಾಕಿದ್ದ.