ತೆಲಂಗಾಣ : ದೇಶದ ರೈತರ ಬದುಕಿಗೆ ತೊಂದರೆಯಾಗಲಿರುವ ಭೂಸ್ವಾಧೀನ ಮಸೂದೆ ಜಾರಿಯಾಗಲು ಬಿಡಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ಆಂಧ್ರಪ್ರದೇಶದ ತೆಲಂಗಾಣ&id=18287'>ತೆಲಂಗಾಣದ ಕೋರ್ಟಿಕಲ್ ಗ್ರಾಮದ ರೈತರ ಸಂಕಷ್ಟ ವಿಚಾರಿಸುವ ನಿಟ್ಟಿನಲ್ಲಿ 15ಕಿ.ಮೀಟರ್ ದೂರದ ಕಿಸಾನ್ ಪಾದಯಾತ್ರೆ ಅಂತ್ಯಗೊಂಡ ನಂತರ ನಡೆದ ಬಹಿರಂಗ ರ್ಯಾಲಿಯನ್ನು ಉದ್ದೇಶಿಸಿ ರಾಹುಲ್ ಮಾತನಾಡಿದರು.
ಹಿಂದಿನ 2ನೇ ಅವಧಿಯ ಯುಪಿಎ ಸರ್ಕಾರ ತಂದಿದ್ದ ಹೊಸ ಭೂಸ್ವಾಧೀನ ಕಾಯ್ದೆಯಲ್ಲಿ ರೈತರ ಕುಟುಂಬಗಳಿಗೆ ಭೂಮಿ ಬೆಲೆಯನ್ನು ಹೆಚ್ಚಿಗೆ ಮಾಡಲಾಗಿತ್ತು. ಅಲ್ಲದೇ ನಮ್ಮಕಾನೂನಿನಲ್ಲಿ ರೈತರ ಭೂಮಿ ವಶಪಡಿಸಿಕೊಳ್ಳೋ ಮೊದಲು ರೈತರ ಅನುಮತಿ ಪಡೆಯಬೇಕೆಂದು ಉಲ್ಲೇಖಿಸಿದ್ದೇವು. ಆದರೆ ಎನ್ ಡಿಎ ಸರ್ಕಾರ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಕಷ್ಟಪಟ್ಟು ದುಡಿಯುವ ರೈತರ ಭೂಮಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ರೈತರ ಜಮೀನನ್ನು ಉದ್ಯಮಿಗಳಿಗೆ ನೀಡಲು ಬಿಡಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ, ತೆಲಂಗಾಣ&id=18287'>ತೆಲಂಗಾಣದಲ್ಲಿ ರಾಹುಲ್ ಗಾಂಧಿ ಕೈಗೊಂಡ 15 ಕಿ.ಮೀ. ದೂರದ ಪಾದಯಾತ್ರೆ ರಾಜಕೀಯ ಪ್ರೇರಿತವಾದದ್ದು ಎಂದು ಆಡಳಿತರೂಢ ತೆಲಂಗಾಣ&id=18287'>ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಟೀಕಿಸಿದೆ. ಬಿಜೆಪಿ ಕೂಡಾ ರಾಹುಲ್ ಪಾದಯಾತ್ರೆಯನ್ನು ಟೀಕಿಸಿದೆ.