ಬೆಂಗಳೂರು : ಕಾನೂನು ಸಚಿವ ಟಿ.ಬಿ.ಜಯಚಂದ್ರ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದು, ಜಯಚಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಕಾನೂನು ಸಚಿವರಾಗಲು ಟಿ.ಬಿ.ಜಯಚಂದ್ರ ಅವರಿಗೆ ಯೋಗ್ಯತೆ ಇಲ್ಲ, ವಿಧಾನಪರಿಷತ್ ನಲ್ಲಿ ಜಯಚಂದ್ರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದರು.
ಜಯಚಂದ್ರ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಾನೂನು ಸಚಿವರಾಗಿ ಸಂವಿಧಾನಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಂದು ಕಿಡಿಕಾರಿದರು. ಅಲದೇ ಸಚಿವ ಸಂಪುಟದಿಂದ ಅವರನ್ನು ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಗ್ರಹಿಸಿದರು.
ಟಿಬಿಜಯಚಂದ್ರ ರಾಜೀನಾಮೆಗೆ ಆಗ್ರಹ. ಕೆ.ಎಸ್.ಈಶ್ವರಪ್ಪ. ವಿಧಾನಪರೊಇಷತ್ ನಲ್ಲಿ ಜಯಕ್ಷ್ಹಂದ್ರ ವಿರುದ್ಧ ಹಕ್ಕುಚ್ಯುತಿ ಮ<ಂದನೆ ಮಾಡುವುದಾಗಿ ಈಶ್ವರಪ್ಪ ಹೇಳಿಕೆ. ಕಾನೂನು ಸಚಿವರಾಗಲು ಯೋಗ್ಯರಲ್ಲ. ತಕ್ಷಣ ರಾಜೀನಮಎ ನೀಡಬೇಕು. ಸಮ್ಪುಟದೊಇಂದ ಕೈಬಿಡಬೇಕು ಎ೩ಂದು ಸಿಎಂಗೆ ಆಗ್ರಹ. ಸಂವಿಧಾನಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ವಿಧಾನಪರಿಷತ್ ವಿಧಾನಸಭೆಯ ಸೃಷ್ಟಿ. ನಾವು ಕಳುಹಿಸಿರುವ ಮಸೂದೆಯನ್ನು ಪರಾಮರ್ಶಿಸಿ, ಅಂಗೀಕರಿಸುವುದಷ್ಟೇ ಪರಿಷತ್ ಕೆಲಸ ಎಂದು ಟಿ.ಬಿ.ಜಯಚಂದ್ರ ಹೇಳಿಕೆ ನೀಡಿದ್ದರು.