ಇಸ್ಲಾಮಾಬಾದ್ : 'ಕಾಶ್ಮೀರ' ವಿವಾದಕ್ಕೆ ಸಂಬಂಧಿಸಿದಂತೆ ಉಗ್ರ ಹಫೀಜ್ ಸಯೀದ್ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ಸೇನೆಗೆ ತನ್ನ ಜಮಾತ್-ಉದ್-ದವಾ ಉಗ್ರ ಸಂಘಟನೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾನೆ.
ಪಾಕಿಸ್ತಾನದ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿರುವ ಉಗ್ರ ಸಯೀದ್, ಕಾಶ್ಮೀರದಲ್ಲಿ ಸ್ವಾತಂತ್ರ್ಯವನ್ನು ಬಯಸುತ್ತಿರುವ ಲಕ್ಷಾಂತರ ಮಂದಿ ಜನರಿದ್ದಾರೆ. ಭಾರತ ಸರ್ಕಾರ ಗುಂಡಿನ ಮೂಲಕ ಉತ್ತರ ನೀಡುವುದಾದರೆ, ನಾವೂ ಕಠಿಣ ರೀತಿಯಲ್ಲೇ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ವಾತಂತ್ರ್ಯ ಬಯಸುತ್ತಿರುವ ಕಾಶ್ಮೀರಿಗಳಿಗೆ ಪಾಕಿಸ್ತಾನ ಸೇನೆ ಸಹಾಯ ಮಾಡಬೇಕು. ಅಗತ್ಯವಿದ್ದರೆ ಪಾಕಿಸ್ತಾನದ ಸೇನೆಗೆ ತನ್ನ ಉಗ್ರ ಸಂಘಟನೆ ಸಹಾಯ ಮಾಡುತ್ತದೆ, ಇದನ್ನು ಜಿಹಾದ್ ಎನ್ನುತ್ತೇವೆ ಎಂದು ಹಫೀಜ್ ಸಯೀದ್ ಹೇಳಿದ್ದಾನೆ. ಜಮಾತ್-ಉದ್-ದವಾ ಉಗ್ರ ಸಂಘಟನೆ ನಿಷೇಧಿತ ಉಗ್ರ ಸಂಘಟನೆಯಾಗಿದೆ ಎಂಬುದು ಗಮನಾರ್ಹ.
ಪಾಕಿಸ್ತಾನ ಸರ್ಕಾರ ಈ ಬಗ್ಗೆ ಗಮನ ಹರಿಸದೇ ಇದ್ದಲ್ಲಿ, ಜಿಹಾದ್ ಮೂಲಕ ಕಾಶ್ಮೀರಿ ಜನತೆಗೆ ಸ್ವಾತಂತ್ರ್ಯ ನೀಡುತ್ತೇವೆ ಎಂದು ಹಫೀಜ್ ಸಯೀದ್ ಘೋಷಿಸಿದ್ದಾನೆ. ಕಾಶ್ಮೀರ ಪ್ರತ್ಯೇಕತಾವಾದಿ ಮಸರತ್ ಆಲಂ ಬಂಧನಕ್ಕೂ ತಗಾದೆ ತೆಗೆದಿದ್ದ ಉಗ್ರ ಹಫೀಜ್ ಸಯೀದ್, ಪ್ರತ್ಯೇಕತಾವಾದಿಗಳು ದೆಹಲಿಯಲ್ಲಿ ಪಾಕ್ ಧ್ವಜ ಹಾರಿಸಿಲ್ಲ ಎಂದು ಸಮರ್ಥನೆ ನೀಡಿದ್ದ.