ನವದೆಹಲಿ : ಕೇಂದ್ರ ಸರ್ಕಾರವು 2014ನೇ ಸಾಲಿನ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕನ್ನಡಕ್ಕೆ 3 ಪ್ರಶಸ್ತಿಗಳು ಸಂದಿವೆ. ’ನಾನು ಅವನಲ್ಲ, ಅವಳು' ಕನ್ನಡ ಚಿತ್ರದ ಮುಖ್ಯ ಪಾತ್ರಧಾರಿ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಂದಿದೆ.
ಇತಿಹಾಸದಲ್ಲೇ ಕನ್ನಡ ಚಿತ್ರ ರಂಗಕ್ಕೆ ಶ್ರೇಷ್ಠ ನಟ ರಾಷ್ಟ್ರೀಯ ಪ್ರಶಸ್ತಿ ಸಿಗುತ್ತಿರುವುದು ಇದು 3ನೇ ಬಾರಿ. ಬರೋಬ್ಬರಿ 3 ದಶಕಗಳ ನಂತರ ಶ್ರೇಷ್ಠ ನಟ ಪ್ರಶಸ್ತಿ ಲಭ್ಯವಾಗುತ್ತಿದೆ ಎಂಬುದು ಮತ್ತೂಂದು ಗಮನಾರ್ಹ ಸಂಗತಿ.
ಇನ್ನು ಕಲಾವಿದ ನಾಗರಾಜು ಅವರಿಗೆ ಉತ್ತಮ ಮೇಕಪ್ ಕಲಾವಿದ ಪ್ರಶಸ್ತಿಯು ನಾನು ಅವನಲ್ಲ, ಅವಳು' ಚಿತ್ರದ ಮೇಕಪ್ ಗಾಗಿ ಪ್ರಾಪ್ತವಾಗಿದೆ. ವಿದ್ಯಾ ಅವರ ಮೂಲಕತೆ ಆಧರಿಸಿದ, ರವಿ.ಆರ್.ಗರಣಿ ನಿರ್ಮಾಣದ, ಬಿ.ಎಸ್.ಲಿಂಗದೇವರು ನಿರ್ದೇಶನದ ನಾನು ಅವನಲ್ಲ, ಅವಳು' ಚಿತ್ರವಾಗಿದೆ. ಇನ್ನು ಉತ್ತಮ ಕನ್ನಡ ಚಿತ್ರ ಪ್ರಶಸ್ತಿಯು ಎಸ್. ಮಂಜುನಾಥ ನಿರ್ದೇಶನದ ಮತ್ತು ಓಂ ಸ್ಟುಡಿಯೋ ನಿರ್ಮಾಣದ ’ಹರಿವು' ಚಿತ್ರದ ಪಾಲಾಗಿದೆ.
ವಿಜಯ್ ಅವರಿಗೆ ರಜತ ಕಮಲ ಮತ್ತು 50 ಸಾವಿರ ರೂ. ನಗದು ಬಹುಮಾನ, ನಾಗರಾಜು ಅವರಿಗೆ ರಜತ ಕಮಲ ಮತ್ತು 50 ಸಾವಿರ ರೂ. ನಗದು ಮತ್ತು ’ಹರಿವು' ಚಿತ್ರಕ್ಕೆ ರಜತ ಕಮಲ ಮತ್ತು ಅದರ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ತಲಾ 1 ಲಕ್ಷ ರೂ. ನಗದು ಬಹುಮಾನ ಲಭಿಸಲಿದೆ.
ಕನ್ನಡಕ್ಕೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಬರುತ್ತಿರುವುದು ಇದು ಮೂರನೆಯ ಸಲ. ಮೊದಲ ಅತ್ಯುತ್ತಮ ನಟ ಪ್ರಶಸ್ತಿ ಶಿವರಾಮ ಕಾರಂತರ ಕಾದಂಬರಿ ಆಧರಿಸಿದ, ಬಿ.ವಿ.ಕಾರಂತ್ ನಿರ್ದೇಶನದ ಚೋಮನ ದುಡಿ ಚಿತ್ರದ ಚೋಮನ ಪಾತ್ರದಲ್ಲಿ ನಟಿಸಿದ್ದ ಬಿ.ವಿ.ವಾಸುದೇವ ರಾವ್ ಅವರಿಗೆ 1975ರಲ್ಲಿ ಬಂದಿತ್ತು. ಎರಡನೆಯ ಪ್ರಶಸ್ತಿ 1986ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ, ಪೂರ್ಣಚಂದ್ರ ತೇಜಸ್ವಿ ಅವರ ಕತೆಯನ್ನು ಆಧರಿಸಿದ ತಬರನ ಕಥೆ ಚಿತ್ರದ ತಬರನ ಪಾತ್ರಧಾರಿ ಚಾರುಹಾಸನ್ ಅವರಿಗೆ ಸಂದಿತ್ತು. ಇದೀಗ ಸುಮಾರು 30 ವರುಷಗಳ ನಂತರ ಮೂರನೆಯ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಾನು ಅವನಲ್ಲ, ಅವಳು' ಚಿತ್ರದ ಅಭಿನಯಕ್ಕಾಗಿ ಸಂಚಾರಿ ವಿಜಯ್ ಅವರು ಗಳಿಸಿಕೊಂಡಿದ್ದಾರೆ.
1 ವಿಜಯ್ ಶ್ರೇಷ್ಠ ನಟ: ಅವನಲ್ಲ ಅವಳು' ಚಿತ್ರದ ಮುಖ್ಯ ಪಾತ್ರಧಾರಿ ನಟನೆಗಾಗಿ ಸಂಚಾರಿ ವಿಜಯ್ಗೆ ಶ್ರೇಷ್ಠ ನಟ ಪ್ರಶಸ್ತಿ
2 ನಾಗರಾಜು ಉತ್ತಮ ಮೇಕಪ್: ಅವನಲ್ಲ ಅವಳು ಮೇಕಪ್ಗಾಗಿ ನಾಗರಾಜು ಅವರಿಗೆ ಅತ್ಯುತ್ತಮ ಪ್ರಸಾದನ ಪ್ರಶಸ್ತಿ
3 ಹರಿವು' ಶ್ರೇಷ್ಠ ಕನ್ನಡ ಚಿತ್ರ: ಓಂ ಸ್ಟುಡಿಯೋ ನಿರ್ಮಾಣ, ಎಸ್.ಮಂಜುನಾಥ್ ನಿರ್ದೇಶನದ ಚಿತ್ರಕ್ಕೆ ಉತ್ತಮ ಕನ್ನಡ ಚಿತ್ರ ಗೌರವ
ಬಹುಭಾಷಾ ಕೋರ್ಟ್' ಅತ್ಯುತ್ತಮ ಚಿತ್ರ, ಮೇರಿ ಕೋಂ' ಶ್ರೇಷ್ಠ ಮನರಂಜನಾ ಚಿತ್ರ
ಬಹುಭಾಷಾ ಚಿತ್ರ, ಚೈತನ್ಯ ತಾಮಣೆ ನಿರ್ದೇಶನದ ಕೋರ್ಟ್' ಉತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದು, ಇದಕ್ಕೆ ಸ್ವರ್ಣ ಕಮಲ ಮತ್ತು 2.5 ಲಕ್ಷ ರೂ. ನಗದು ಬಹುಮಾನ ಪ್ರಾಪ್ತಿಯಾಗಲಿದೆ. ಹಿಂದಿಯ ಹಿಟ್ ಚಿತ್ರ, ಪ್ರಿಯಾಂಕಾ ಚೋಪ್ರಾ ಅಭಿನಯದ ಹಾಗೀ ಉಮಂಗ್ ಠಾಕೂರ್ ನಿರ್ದೇಶನದ ಮೇರಿ ಕೋಂ' ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಸ್ವರ್ಣ ಕಮಲ ಮತ್ತು 2 ಲಕ್ಷ ರೂ. ಬಹುಮಾನ ಪಡೆಯಲಿದೆ. ಬಂಗಾಳಿ ನಿರ್ದೇಶಕ ಶ್ರೀಜಿತ್ ಮುಖರ್ಜಿ ಅವರು ಚತುಷೊRàನ' ಚಿತ್ರಕ್ಕೆ ಉತ್ತಮ ನಿರ್ದೇಶಕ ಗೌರವಕ್ಕೆ ಪಾತ್ರರಾಗಿದ್ದು, ಅವರಿಗೆ ಸ್ವರ್ಣ ಕಮಲ ಮತ್ತು 2.5 ಲಕ್ಷ ರೂ. ನಗದು ದೊರೆಯಲಿದೆ. ಉತ್ತಮ ನಟಿ' ಕಂಗನಾ ರಾಣಾವತ್ ಪಾಲಾಗಿದ್ದು, ಅವರು ಕ್ವೀನ್' ಹಿಂದಿ ಚಿತ್ರಕ್ಕೆ ಈ ಗೌರವ ಪಡೆದಿದ್ದಾರೆ. ಅವರಿಗೆ ರಜತ ಕಮಲ ಮತ್ತು 50 ಸಾವಿರ ರೂ. ಬಹುಮಾನ ಲಭಿಸಲಿದೆ. 28ರ ಹರೆಯದ ಕಂಗನಾ ಅವರು 2010ರಲ್ಲಿ ಫ್ಯಾಶನ್' ಚಿತ್ರಕ್ಕಾಗಿ ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದರು.
ತೀರ್ಪುಗಾರರ ಸಮಿತಿಯ ಪ್ರಶಸ್ತಿ ಘೋಷಣೆಗೂ ಮುನ್ನ ಕೇಂದ್ರ ವಾರ್ತಾ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿತು. ಅವರ ಶ್ರಮವನ್ನು ಜೇಟ್ಲಿ ಶ್ಲಾಘಿಸಿದ್ದಾರೆ.
ಪ್ರಶಸ್ತಿ ಪಟ್ಟಿ
ಶ್ರೇಷ್ಠ ಚಿತ್ರ
ಕೋರ್ಟ್ (ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ)
ಜನಪ್ರಿಯ ಮನರಂಜನಾ ಚಿತ್ರ
ಮೇರಿ ಕೋಂ (ಹಿಂದಿ)
ನಿರ್ದೇಶಕ
ಶ್ರೀಜಿತ್ ಮುಖರ್ಜಿ ( ಚತುಷ್ಕೋನ ಬಂಗಾಳಿ ಚಿತ್ರ)
ನಟ
ವಿಜಯ್ ( ಅವನಲ್ಲ ಅವಳು' ಕನ್ನಡ ಚಿತ್ರ)
ನಟಿ
ಕಂಗನಾ ರಾಣಾವತ್ ( ಕ್ವೀನ್' ಹಿಂದಿ ಚಿತ್ರ)
ಪೋಷಕ ನಟ
ಬಾಬಿ ಸಿಂಹ ( ಜಿಗರ್ಥಂಡಾ' ತಮಿಳು ಚಿತ್ರ)
ಪೋಷಕ ನಡಿ
ಬಲ್ಜಿಂದರ್ ಕೌರ್ ( ಪಗಡಿ ದಿ ಆನರ್' ಪಂಜಾಬಿ ಚಿತ್ರ)
ಸಂಗೀತ ನಿರ್ದೇಶಕ
ವಿಶಾಲ್ ಭಾರದ್ವಾಜ್ ( ಹೈದರ್' ಹಿಂದಿ ಚಿತ್ರ)
ಹಿನ್ನೆಲೆ ಗಾಯಕ
ಸುಖವಿಂದರ್ ಸಿಂಗ್ ( ಹೈದರ್' ಹಿಂದಿ ಚಿತ್ರ)
ಹಿನ್ನೆಲೆ ಗಾಯಕಿ
ಉತ್ತರಾ ಉನ್ನಿಕೃಷ್ಣನ್ ( ಶೈವಂ' ತಮಿಳು ಚಿತ್ರ)
ಮೇಕಪ್ ಕಲಾವಿದ
ನಾಗರಾಜು ( ಅವನಲ್ಲ ಅವಳು' ಕನ್ನಡ ಚಿತ್ರ)
ಉತ್ತಮ ಕನ್ನಡ ಚಿತ್ರ
ಹರಿವು (ನಿರ್ದೇಶನ: ಎಸ್. ಮಂಜುನಾಥ)