ಜೈಪುರ : ಮದರ್ ತೆರೇಸಾ ಅವರು ಬಡವರಿಗೆ ಮಾಡಿದ ಸೇವೆಯ ಹಿಂದಿನ ಉದ್ದೇಶ ಮತಾಂತರವಾಗಿತ್ತು ಎಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದ್ದಾರೆ.
ರಾಜಸ್ತಾನದ ಭರತ್ ಪುರದಲ್ಲಿ ಅಪ್ನಾ ಘರ್ ಎಂಬ ಎನ್.ಜಿ.ಒ ಆಯೋಜಿಸಿದ್ದ ಮದರ್ ತೆರೇಸಾ ಅವರ ಸೇವೆ ಉತ್ತಮವಾದುದು. ಆದರೆ ಅದರ ಹಿಂದೆ ಒಂದು ಉದ್ದೇಶವಿತ್ತು. ಸೇವೆ ಪಡೆದ ವ್ಯಕ್ತಿಯನ್ನು ಮತಾಂತರ ಮಾಡುವುದು ಅವರ ಸೇವೆಯ ಗುರಿಯಾಗಿತ್ತು. ಸೇವೆಯ ಹೆಸರಲ್ಲಿ ಮತಾಂತರ ಮಾಡಿದರೆ ಸೇವೆಯ ಮೌಲ್ಯವೇ ಕಳೆದುಹೋಗುತ್ತದೆ ಎಂದು ತಿಳಿಸಿದ್ದಾರೆ. ಮೋಹನ್ ಭಾಗವತ್ ಅವರ ಈ ಹೇಳಿಕೆ ದೇಶಾದ್ಯಂತ ವಿವಾದ ಸೃಷ್ಟಿಸಿದೆ.
ಮದರ್ ತೆರೇಸಾ ಸೇವೆ ಹಿಂದೆ ಮತಾಂತರ ಹುನ್ನಾರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮದರ್ ತೆರೇಸಾ ಜತೆ ನಾನೂ ಕೆಲ ಕಾಲ ಕೆಲಸ ಮಾಡಿದ್ದೇನೆ. ಅವರದ್ದು ಒಂದು ಪರಿಶುದ್ಧ ಆತ್ಮ. ಮದರ್ ತೆರೇಸಾ ಶ್ರೇಷ್ಠ ವ್ಯಕ್ತಿಯಾಗಿದ್ದರು. ದಯವಿಟ್ಟು ಅವರನ್ನು ಬಿಟ್ಟುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.