ಪಾಟ್ನಾ : ಬಿಹಾರ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಜೆಡಿಯು ನಾಯಕ ನಿತೀಶ್ ಕುಮಾರ್, ಮಾಂಝಿ ಮಾಡಿರುವುದು ಬಂಡಾಯವಲ್ಲ, ವಂಚನೆ ಎಂದು ತಿರುಗೇಟು ನೀಡಿದ್ದಾರೆ.
ಪಾಟ್ನಾದಲ್ಲಿ ಮಾತನಾಡಿದ ಅವರು, ನಾನು ಯಾರ ಕೈಗೊಂಬೆಯೂ ಅಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮಾಂಝಿ ಹೇಳಿಕೆ ನೀಡಿದ್ದಕ್ಕೆ ಪ್ರತಿಯಾಗಿ ನಿತೀಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.
ಮಾಂಝಿ ಮಾಡಿರುವುದು ತಪ್ಪಲ್ಲ, ಇದೊಂದು ಮಹಾಪರಾಧ ಎಂದು ಕಿಡಿಕಾರಿದ ಅವರು, ನಾನು ತುಂಬಾ ಬಾವುಕನಾಗಿ ನಿರ್ಧಾರ ಕೈಗೊಂಡು, ಮಾಂಝಿಗೆ ಸರ್ಕಾರ ನಡೆಸುವ ಅಧಿಕಾರ ಕೊಟ್ಟಿದ್ದೆ. ಆದರೆ ಮಾಂಝಿ ವಿಶ್ವಾಸದ್ರೋಹ ಎಸಗಿದರು ಎಂದು ತಿಳಿಸಿದ್ದಾರೆ.