Untitled Document
Sign Up | Login    
Dynamic website and Portals
  
February 19, 2015

ಬಿಹಾರ ರಾಜಕೀಯ ಬಿಕ್ಕಟ್ಟು: 8 ಶಾಸಕರಿಗೆ ಕೋರ್ಟ್ ನಿರ್ಬಂಧ

ಪಾಟ್ನಾ : ಬಿಹಾರ ರಾಜಕೀಯ ಬಿಕ್ಕಟ್ಟಿಗೆ ಫೆ.20ರಂದು ತೆರೆ ಬೀಳಲಿದ್ದು, ಏತನ್ಮಧ್ಯೆ ಜೆಡಿಯುನಿಂದ ಬಂಡಾಯವೆದ್ದಿದ್ದ 8 ಮಂದಿ ಶಾಸಕರಿಗೆ ವಿಶ್ವಾಸಮತ ಸಂದರ್ಭದಲ್ಲಿ ಮತ ಚಲಾಯಿಸದಂತೆ ಪಾಟ್ನಾ ಹೈಕೋರ್ಟ್ ನಿರ್ಬಂಧ ವಿಧಿಸಿರುವುದು ಬಿಹಾರ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿಗೆ ದೊಡ್ಡ ಹಿನ್ನಡೆ ಉಂಟುಮಾಡಿದೆ.

ಪಾಟ್ನಾ ಹೈಕೋರ್ಟ್ ನ ದ್ವಿಸದಸ್ಯ ಪೀಠ ನೀಡಿರುವ ಈ ಆದೇಶ ನಾಳೆ ಬಿಹಾರ ಅಸೆಂಬ್ಲಿಯಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಮಾಂಝಿಗೆ ಕಂಟಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ 8 ಮಂದಿ ಸೇರಿದಂತೆ ತನಗಿರುವ ಬೆಂಬಲವನ್ನು ಸಂಜೆ ಬಲಪ್ರದರ್ಶಿಸಲು ಮಾಂಝಿ ನಿರ್ಧರಿಸಿದ್ದರು. ಅಷ್ಟೇ ಅಲ್ಲ ಕ್ಯಾಬಿನೆಟ್ ಸಭೆಯನ್ನು ಕೂಡಾ ಕರೆದಿದ್ದರು. ಆದರೆ ಇದೀಗ ಮಾಂಝಿ ಬೆಂಬಲಿತ 8 ಮಂದಿ ಜೆಡಿಯು ಸದಸ್ಯರು ಮತದಾನ ಮಾಡುವಂತಿಲ್ಲ ಎಂಬ ಹೈಕೋರ್ಟ್ ಆದೇಶ ಮಾಂಝಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited