ನವದೆಹಲಿ : 'ದೆಹಲಿ' ಚುನಾವಣೆಯಲ್ಲಿ ಬಿಜೆಪಿಗೆ ಬಾಬಾ ರಾಮ್ ರಹೀಮ್ ತಮ್ಮ ಬೆಂಬಲ ಘೋಷಿಸಿದ್ದಾರೆ.
ಡೇರಾ ಸಚ್ಚಾ ಸೌಧ (ಡಿಎಸ್ಎಸ್ ) ಆಧ್ಯಾತ್ಮ ಸಂಘಟನೆಯಿಂದ ಹಲವು ಸಮಾಜ ಮುಖಿ ಕೆಲಸಮಾಡಿರುವ ಬಾಬಾ ರಾಮ್ ರಹೀಮ್, ದೆಹಲಿಯಲ್ಲಿ 20ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಈಗ ಬಿಜೆಪಿಗೆ ಬಾಬಾ ಬೆಂಬಲ ದೊರೆತಿದೆ.
ಇತ್ತೀಚಿನ ವರದಿ ಪ್ರಕಾರ ಡೇರಾ ಸಚ್ಚಾ ಸೌಧ ಸಂಘಟನೆ ಸದಸ್ಯರು ದೆಹಲಿಯಲ್ಲಿ ಪ್ರತಿ ಮನೆಗೆ ತೆರಳಿ ಬಿಜೆಪಿ ಪರ ಮತ ಯಾಚಿಸಲಿದ್ದಾರೆ. ಇದರಿಂದಾಗಿ ಬಿಜೆಪಿಗೆ ಹೆಚ್ಚು ಸ್ಥಾನ ಗಳಿಸುವುದು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಈ ಹಿಂದೆ ಹರ್ಯಾಣ ಚುನಾವಣೆಯಲ್ಲೂ ಬಾಬಾ ರಾಮ್ ರಹೀಮ್ ಬಿಜೆಪಿಗೆ ಬೆಂಬಲ ನೀಡಿದ್ದರು. ಈ ಮೂಲಕ ಬಿಜೆಪಿ ಗೆಲುವು ಸ್ವಲ್ಪ ಮಟ್ಟಿಗೆ ಸುಲಭವಾಗಿತ್ತು.
ಹರ್ಯಾಣದಲ್ಲಿ ಚುನಾವಣೆ ನಡೆಯುವುದಕ್ಕೂ ಕೇವಲ ಎರಡು ದಿನಗಳ ಮುನ್ನ ಬಾಬಾ ರಾಮ್ ರಹೀಮ್ ಸಂಘಟನೆ ಬಿಜೆಪಿಗೆ ಬೆಂಬಲ ಘೋಷಿಸಿ ಮನೆ-ಮನೆ ಪ್ರಚಾರ ನಡೆಸಿತ್ತು. ಈಗ ದೆಹಲಿಯಲ್ಲೂ ಇದೇ ಮಾದರಿಯ ಯೋಜನೆ ರೂಪಿಸಿದ್ದಾರೆ.
ಡೇರಾ ಸಚ್ಚಾ ಸೌಧ ಸಂಘಟನೆ ಬಿಜೆಪಿಗೆ ಬೆಂಬಲ ನೀಡುವುದಕ್ಕೂ ಮುನ್ನ ಬಿಜೆಪಿ ನಾಯಕ ಶಹನವಾಜ್ ಹುಸೇನ್ ಡಿ.ಎಸ್.ಎಸ್ ನ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.