Untitled Document
Sign Up | Login    
Dynamic website and Portals
  
February 3, 2015

ವಿಧಾನಪರಿಷತ್ ನಲ್ಲಿ ಆಡಳಿತ-ವಿಪಕ್ಷಗಳ ನಡುವೆ ವಾಗ್ವಾದ

ವಿಧಾನಪರಿಷತ್ ನಲ್ಲಿ ಆಡಳಿತ-ವಿಪಕ್ಷಗಳ ನಡುವೆ ವಾಗ್ವಾದ

ಬೆಂಗಳೂರು : ವಿಧಾನಪರಿಷತ್ ನಲ್ಲಿ ಆಡಳಿತ, ವಿಪಕ್ಷಗಳ ನಡುವೆ ವಾಗ್ವಾದ ಆರಂಭವಾಗಿದೆ. ವಿದ್ಯುತ್ ಮೀಟರ್ ಖರೀದಿ ಸಬಂಧ ಉಭಯ ಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯಿತು.

ಸಿಂಗಲ್ ಫೇಸ್ ಎಲೆಕ್ಟ್ರೋ ಮೀಟರ್ ಖರೀದಿಯಲ್ಲಿ 180 ಕೋಟಿ ಅವ್ಯಹಾರ ನಡೆದಿದೆ. ಸ್ವತ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆರೋಪ ಮಾಡಿದರು. ಇದು ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ವಿದ್ಯುತ್ ಮೀಟರ್ ಖರೀದಿ ಬಗ್ಗೆ ಇಂಧನ ಸಚಿವರಿಗೆ ಪತ್ರ. ಪತ್ರ ಬರೆದು ೫ ತಿಂಗಳಾದರೂ ಪ್ರತಿಕ್ರಿಯೆ ಇಲ್ಲದ ಹಿನ್ನಲೆಯಲ್ಲಿ ಗರಂ ಆದ ಈಊಶ್ವರಪ್ಪ, ನಿಮಗೆ ನಾಚಿಕೆಯಾಗಲ್ವ ಎಂದರು. ಸಚಿವರ ವಿರುದ್ಧ ನಿಲುವಳಿ ಸೂಚನೆ ಮಂಡನೆಗೆ ಪ್ರ್ತಸ್ತಾಪಿಸಿದರು. ನಿಳುವಳಿ ಸೂಚನೆಗೆ ಸಭಾಪತಿ ಅನುಮತಿ.

ರಾಜ್ಯದ 5 ಹೆಸ್ಕಾಂ ಗಳಲ್ಲಿ ಸಿಂಗಲ್ ಫೇಸ್ ವಿದ್ಯುತ್ ಮೀಟರ್ ಖರೀದಿ ಮಾಡಲಾಗಿದೆ. ಕಳೆದ 2 ವರ್ಷಗಳಿಂದ ಈ ವರೆಗೆ 20ಲಕ್ಷ ಮೀಟರ್ ಖರೀದಿ ಮಾಡಲಾಗಿದೆ. ಎಲ್ ಆಂಡ ಜಿ ಎಂಬ ಸಂಸ್ಥೆಯಿಂದ ಮೀಟರ್ ಖರೀದಿ ಮಾಡಲಾಗಿದ್ದು, ಈವರೆಗೆ ಒಂದೇ ಒಂದು ಬಾರಿಯೂ ಟೆಂಡರ್ ಕರೆದಿಲ್ಲ. ಟೆಂಡರ್ ಕರೆಯಲಾಗುತ್ತದೆ ಮತ್ತೆ ಅದನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಈ ರೀತಿ ಮೂರು ಬಾರಿ ಮಾಡಲಾಗಿದೆ ಎಂದು ಈಶ್ವರಪ್ಪ ಕಿಡಿಕಾರಿದರು.

ಅಲ್ಲದೇ 1 ಲಕ್ಷಕ್ಕಿಂತ ಹೆಚ್ಚು ಮೀಟರ್ ಖರೀದಿಸುವಾಗ ಟೆಂಡರ್ ಕರೆಯಬೇಕು ಎಂದು ಕೆಟಿಪಿಪಿ ಕಾಯ್ದೆಯಿದೆ. ಆದರೆ ಡಿ.ಕೆ.ಶಿವಕುಮಾರ್ ಈ ವರೆಗೆ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಮೀಟರ್ ಖರೀದಿ ಮಾಡಿದ್ದಾರೆ. ಎಲ್ ಆಂಡ್ ಜಿ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 180 ಕೋಟಿ ಅವ್ಯಹಾರ ನಡೆದಿದೆ. ಈ ಬಗ್ಗೆ ಇಂಧನ ಸಚಿವರಿಗೆ ಗಮನ ಸೆಳೆಯಲು ಪತ್ರ ಬರೆದಿದ್ದೆ. ಓರ್ವ ವಿಪಕ್ಷ ನಾಯಕ ಪತ್ರ ಬರೆದು 5 ತಿಂಗಳಾಗಿವೆ. ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪತ್ರದ ಬಗ್ಗೆ ಈಗ ಪರಿಶೀಲನೆ ನಡೆಸುತ್ತೇವೆ ಎನ್ನುತ್ತೀದ್ದೀರಾ ನಿಮಗೆ ನಾಚಿಕೆಯಾಗಲ್ವಾ ಎಂದು ಇಂಧನ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಅವ್ಯವಹಾರ ಆರೋಪ. ಆರೋಪ ತಳ್ಳಿ ಹಾಕಿದರು. ಇದರಿಂದ ಗರಂ ಆದ ಈಶ್ವರಪ್ಪ ನಿಮ್ಮಯೋಗ್ಯತೆ ಚೆನ್ನಾಗಿ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.

ನಾನು ಬೆಂಗಳೂರಿಗೆ ಕಿವಿ ಮೇಲೆ ಹೂವಿಟ್ಟುಕೊಂಡು ಬಂದಿಲ್ಲ. ರಾಜಕಾರಣ ಮಾಡಲೆಂದೇ ಬಂದಿದ್ದೇನೆ. ಯಾರ ಯೋಗ್ಯತೆ ಏನೆಂಬುದನ್ನು ಜನರು ನಿರ್ಧರಿಸುತ್ತಾರೆ. ನೀವು ಅದರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದ ಶಿವಕುಮಾರ್. ಈಶ್ವರಪ್ಪ ಹಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಡಿ.ಕೆ.ಶಿವಕುಮಾರ್, ಈಶ್ವರಪ್ಪ ಮಾತಿನ ಮಧ್ಯೆ ಪ್ರವೇಶ ಮಾಡಿದ ಸಚಿವ ದಿನೇಶ್ ಗುಂಡೂರಾವ್, ಈಶ್ವರಪ್ಪ ಕೆಟಿಪಿಪಿ ನಿಯಮ ಹೇಳುವ ಮೂಲಕ ಸದನದ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುವರ್ಣಸೌಧ ನಿರ್ಮಿಸುವಾಗ ಯೋಜನಾವೆಚ್ಚ ಹೆಚ್ಚಳವಾಗಿದೆ. 3೦೦ ಕೋಟಿ ಯೋಜನಾ ವೆಚ್ಚ 5೦೦ ಕೋಟಿ ದಾಟಿತ್ತು. ಆಗ ನಿಮಗೆ ಕೆಟಿಪಿಪಿ ನಿಯಮದ ಬಗ್ಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಗುಂಡೂರಾವ್ ಆರೋಪಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸಚಿವರಾಗಲು ನಿಮಗೆ ಯೋಗ್ಯತೆಯಿದೆಯೇ. ಈ ವಿಚಾರ ಇಟ್ಟುಕೊಂಡು ಅಕ್ರಮ ಸಮರ್ಥಿಸಿಕೊಳ್ಳುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ಸಭಾಪತಿಗೆ ಮನವಿ ಮಾಡಿದ ಅವರು, ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒ೦ಪ್ಪಿಸುವಂತೆ ಈಶ್ವರಪ್ಪ ಆಗ್ರಹಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited