ನವದೆಹಲಿ : 'ಪತ್ರಿಕಾ ಮಂಡಳಿ'ಯ ಮಾಜಿ ಅಧ್ಯಕ್ಷ ಮಾರ್ಕಾಂಡೇಯ ಕಾಟ್ಜು ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಸುಂದರವಾಗಿರುವ ಕತ್ರಿನಾ ಕೈಫ್ ಭಾರತದ ರಾಷ್ಟ್ರಪತಿಯಾಗಲಿ ಎಂದು ಹೇಳಿದ ನಂತರ ಈಗ ಕಿರಣ್ ಬೇಡಿ ಹಾಗೂ ಶಾಜಿಯಾ ಇಲ್ಮಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೆಹಲಿ ಬಿಜೆಪಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವುದಕ್ಕಿಂತ ಶಾಜಿಯಾ ಇಲ್ಮಿ ಅವರನ್ನು ಸಿ.ಎಂ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೆ ಪಕ್ಷದ ಗೆಲುವು ಸುಲಭವಾಗಿರುತ್ತಿತ್ತು ಎಂದು ಕಾಟ್ಜು ಹೇಳಿದ್ದಾರೆ. ಕಿರಣ್ ಬೇಡಿಗಿಂತಲೂ ಶಾಜಿಯಾ ಇಲ್ಮಿ ಸುಂದರವಾಗಿದ್ದಾರೆ ಆದ್ದರಿಂದ ಇಲ್ಮಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೆ ಬಿಜೆಪಿ ಖಂಡಿತಾ ದೆಹಲಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿತ್ತು ಎಂದಿದ್ದಾರೆ.
ಈ ಹಿಂದೆ ಇದೇ ಕಾರಣ ನೀಡಿದ್ದ ಕಾಟ್ಜು ಕತ್ರಿನಾ ಕೈಫ್ ಅವರು ದೇಶದ ರಾಷ್ಟ್ರಪತಿಯಾಗಲಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೇ ದೇಶದಲ್ಲಿರುವ ಶೇ.90ರಷ್ಟು ಜನತೆ ಈಡಿಯಟ್ಸ್ ಎಂದು ಹೇಳಿದ್ದರು.