Untitled Document
Sign Up | Login    
Dynamic website and Portals
  
January 27, 2015

ಉಪರಾಷ್ಟ್ರಪತಿಗಳು ಗಣರಾಜ್ಯೋತ್ಸವದಂದು ಶಿಷ್ಟಾಚಾರ ಉಲ್ಲಂಘಿಸಿಲ್ಲ

ನವದೆಹಲಿ : 'ಗಣರಾಜ್ಯೋತ್ಸ'ವದ ವೇಳೆ ಉಪರಾಷ್ಟ್ರಪತಿಗಳು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂಬ ವರದಿಗಳಿಗೆ ಹಮೀದ್ ಅನ್ಸಾರಿ ಪ್ರತಿಕ್ರಿಯಿಸಿದ್ದು, ತಾವು ರಾಷ್ಟ್ರಗೀತೆ ಹಾಡುವ ವೇಳೆ ಶಿಷ್ಟಾಚಾರ ಪಾಲಿಸಿರುವುದಾಗಿ ತಿಳಿಸಿದ್ದಾರೆ.

ಧ್ವಜಾರೋಹಣ ಅಥವಾ ರಾಷ್ಟ್ರಗೀತೆಯನ್ನು ಹಾಡುವ ವೇಳೆ ಉಪರಾಷ್ಟ್ರಪತಿಗಳು ಎದ್ದುನಿಂತು ಗೌರವ ಸೂಚಿಸುವುದು ಶಿಷ್ಟಾಚಾರ ಅದನ್ನು ಪಾಲಿಸಿರುವುದಾಗಿ ಹಮೀದ್ ಅನ್ಸಾರಿ ಸ್ಪಷ್ಟಪಡಿಸಿದ್ದಾರೆ. ಸಮವಸ್ತ್ರದಲ್ಲಿರುವ ಅಧಿಕಾರಿಗಳು ಧ್ವಜಾರೋಹಣದ ವೇಳೆ ಸೆಲ್ಯೂಟ್ ಮಾಡಬೇಕು ಮತ್ತು ಸಾಮಾನ್ಯ ಉಡುಗೆಯಲ್ಲಿರುವವರು ಎದ್ದು ನಿಂತು ಗೌರವ ಸಲ್ಲಿಸಬೇಕು, ತಾವು ಸಾಮಾನ್ಯ ಉಡುಗೆಯಲ್ಲಿದ್ದ ಕಾರಣ ಎದ್ದು ನಿಂತು ಗೌರವ ಸಲ್ಲಿಸಿರುವುದಾಗಿ ಹಮೀದ್ ಅನ್ಸಾರಿ ತಿಳಿಸಿದ್ದಾರೆ.

ಇದೇ ವೇಳೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಉಪರಾಷ್ಟ್ರಪತಿಗಳ ವಿಶೇಷ ಅಧಿಕಾರಿ ರಾಜ್ಯಸಭಾ ಟಿವಿ ಸಂಪಾದಕರಾದ ಗುರುದೀಪ್ ಸಿಂಗ್, ಗಣರಾಜ್ಯೋತ್ಸವ ದಿನದಂದು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಯಾವುದೇ ರೀತಿಯಲ್ಲಿಯೂ ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ ಎಂದಿದ್ದಾರೆ.

ನವದೆಹಲಿಯ ರಾಜ್‌ ಪಥ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣದ ವೇಳೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸೆಲ್ಯೂಟ್ ಮಾಡಿರಲಿಲ್ಲ. ಈ ಚಿತ್ರಗಳು ಸಾಮಾಜಿಕ ಫೇಸ್‌ ಬುಕ್ ಹಾಗೂ ಇತರ ಜಾಲತಾಣಗಳಲ್ಲಿ ತೀವ್ರ ಚರ್ಚೆಗೊಳಗಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited