ನವದೆಹಲಿ : ಕಿರಣ್ ಬೇಡಿ ಖಂಡಿತವಾಗಿಯೂ ಉತ್ತಮ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಶಾಂತಿ ಭೂಷಣ್ ಹೊಗಳಿಕೆ ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಂತಿ ಭೂಷಣ್, ಬಿಜೆಪಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಯನ್ನಾಗಿ ಆಯ್ಕೆ ಮಾಡಿರುವುದು ಒಂದು ದೊಡ್ಡ ಅಸ್ತ್ರ. ದೆಹಲಿಗೆ ಕಿರಣ್ ಬೇಡಿ ಅವರಂಥಹ ಪ್ರಾಮಾಣಿಕ ಮುಖ್ಯಮಂತ್ರಿಯ ಅಗತ್ಯವಿದ್ದು, ಅವರು ಮುಖ್ಯಮಂತ್ರಿಯಾದರೆ ನಾನು ಸಂತೋಷಪಡುತ್ತೇನೆ ಎಂದರು.
ಕೇಜ್ರಿವಾಲ್ ಅವರಿಗಿಂತ ಬೇಡಿ ಅವರು ಯಾವ ವಿಭಾಗದಲ್ಲೂ ಕಡಿಮೆ ಇಲ್ಲ, ಬೇಡಿ ಅವರು ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಣಿಯಾಗಿದ್ದರು. ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾರಿ ಕೊಡುಗೆ ನೀಡಿದ್ದು ,ಅವರು ಮುಖ್ಯಮಂತ್ರಿಯಾದರೆ ಉತ್ತಮ ಆಡಳಿತ ನೀಡುತ್ತಾರೆ ಎಂದು ಶ್ಲಾಘಿಸ್ದರು.
ಇದೇ ವೇಳೆ ಆಪ್ ನಲ್ಲಿ ನನ್ನ ಪ್ರಕಾರ ಎಲ್ಲವೂ ಸರಿಯಿಲ್ಲ ಎಂದು ಶಾಂತಿ ಭೂಷಣ್ ಹೇಳಿದ್ದಾರೆ. ಶಾಂತಿ ಭೂಷಣ್ ಈ ಹೇಳಿಕೆ ಆಪ್ ಗೆ ತೀವ್ರ ಮುಜುಗರವನ್ನುಂಟುಮಾಡಿದೆ.